ಕಡಬ ತಾಲೂಕು ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಭೆ ; ತಾಲೂಕು ಸಮಿತಿ ರಚನೆ

0

ಕಡಬ: ತಾಲೂಕು ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಭೆಯು ಫೆ.25ರಂದು ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ರಾಜ್ಯ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷ ನಾಗೇಶ್ ಮೂಡುಬಿದ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಡಬ ತಾಲೂಕು ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಪ್ರಧಾನ ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಕ ರಾ ಪ್ರಾ ಶಾ.ಶಿ.ಸ. ಬೆಂಗಳೂರು (ರಿ) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ದಕ್ಷಿಣ ಕನ್ನಡ ಜಿಲ್ಲಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗರಾಜು ರವರುಗಳು ಉಪಸ್ಥಿತರಿದ್ದರು.

ಅಧ್ಯಕ್ಷ: ಬೇಬಿ, ಪ್ರ. ಕಾರ್ಯದರ್ಶಿ: ರಾಮಣ್ಣ ಬಿ.

ನೂತನ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಸ.ಹಿ.ಪ್ರಾ. ಶಾಲೆ ರೆಂಜಿಲಾಡಿ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕ ಬೇಬಿರವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರನ್ನು ಸೀನಿಯಾರಿಟಿ ಆಧಾರದ ಮೇಲೆ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಸ ಹಿ ಪ್ರಾ ಶಾಲೆ ಆಲಂಕಾರು ಶಾಲೆಯ ಶಿಕ್ಷಕಿ ವನಜ, ಸ ಉ ಹಿ ಪ್ರಾ ಶಾಲೆ ಸವಣೂರು ಶಾಲಾ ಶಿಕ್ಷಕ ಬಾಲಕೃಷ್ಣ ಕೆ. ಪ್ರಧಾನ ಕಾರ್ಯದರ್ಶಿಯಾಗಿ ಸ.ಹಿ.ಪ್ರಾ. ಶಾಲೆ ಕೊಣಾಲು ಶಾಲೆಯ ಶಿಕ್ಷಕ ರಾಮಣ್ಣ ಬಿ. ಜೊತೆ ಕಾರ್ಯದರ್ಶಿಗಳಾಗಿ ಸ ಹಿ ಪ್ರಾ ಏನೆಕಲ್ ಶಾಲಾ ಶಿಕ್ಷಕಿ ಕಮಲ, ಸ ಹಿ ಪ್ರಾ ಶಾಲೆ ಕುಂತೂರು ಇಲ್ಲಿಯ ಶಿಕ್ಷಕಿ ನೀಲಮ್ಮ, ಸಂಘಟನಾ ಕಾರ್ಯದರ್ಶಿಗಳಾಗಿ ಸವಿತಾ (ಸ.ಹಿ.ಪ್ರಾ. ಶಾಲೆ ಸುಬ್ರಹ್ಮಣ್ಯ) ಚಂದ್ರಶೇಖರ (ಸ.ಹಿ.ಪ್ರಾ.ಶಾಲೆ ಬಿಳಿನೆಲೆ) ಕೋಶಾಧಿಕಾರಿಯಾಗಿ ಜೋನ್ ಕೆ.ಪಿ.(ಸ.ಹಿ.ಪ್ರಾ. ಶಾಲೆ ಗೋಳಿತೊಟ್ಟು) ಇವರುಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here