ಮಿತ್ತೂರು ಫ್ರೆಂಡ್ಸ್‌ ಕ್ಲಬ್ ಆಶ್ರಯದಲ್ಲಿ ಹೊನಲು ಬೆಳಕಿನ ಪ್ರೋ ಮಾದರಿಯ ಮ್ಯಾಟ್‌ ಅಂಕಣದ ಕಬಡ್ಡಿ ಪಂದ್ಯಾಟ, ಹಗ್ಗ ಜಗ್ಗಾಟ

0

ವಿಟ್ಲ: ಫ್ರೆಂಡ್ಸ್‌ ಕ್ಲಬ್ ರಿ. ಮಿತ್ತೂರು ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಪ್ರೋ ಮಾದರಿಯ ಮ್ಯಾಟ್‌ ಅಂಕಣದ ಕಬಡ್ಡಿ ಪಂದ್ಯಾಟವನ್ನು ಕೋಲ್ಪೆ ಶ್ರೀ ಷಣ್ಮುಖ ಸುಬಹ್ಮಣ್ಯ ದೇವಸ್ಥಾನದ ಮೋಕ್ತೇಸರರಾದ ಸುರೇಶ್‌ ಕೆ.ಯಸ್.ರವರು ದೀಪ ಬೆಳಗಿ ಉದ್ಘಾಟಿಸಿದರು.

ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಹಾಗೂ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮಾಲಕರಾದ ದಿವಾಕರ ದಾಸ್ ನೇರ್ಲಾಜೆರವರು ಹಗ್ಗ ಜಗ್ಗಾಟದ ಅಂಕಣ ಉದ್ಘಾಟಿಸಿದರು. ಕುಮಟ ಅರಕ್ಷಕ ಠಾಣೆಯ ವೃತ್ತ ನೀರೀಕ್ಷ ತಿಮ್ಮಪ್ಪ ನಾಯ್ಕ್‌ ಕಬಡ್ಡಿ ಅಂಕಣ ಉದ್ಘಾಟಿಸಿದರು, ಶಾಸಕ‌‌ ಸಂಜೀವ ಮಠಂದೂರುರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಯೂಸೂಪ್ ಮಾಸ್ಟರ್, ಇಡ್ಕಿದು ಸೇವಾ ಸಹಕಾರಿ ಸಂಘದ ನಿರ್ದೇಶಕ ಶಿವಪ್ರಕಾಶ್ ಕೆ.ವಿ., ಎಸ್.ಡಿ.ಎಂ. ಸಿ ಅಧ್ಯಕ್ಷ ಆದಂ ಎಂ. ಎಂ. ಎಸ್. ಮಿತ್ತೂರು, ಶಾರಾದಾಂಭ ಭಜನಾ ಮಂದಿರದ ಅಧ್ಯಕ್ಷ ಜಗದೀಶ್, ಇಡ್ಕಿದು ಗ್ರಾ. ಪಂ. ಸದಸ್ಯ ರಮೇಶ್ ಪೂಜಾರಿ, ಶಾಲಾ ಮುಖ್ಯ ಗುರು ಸಂಜೀವ ನಾಯ್ಕ್ , ರವಿ ವಾಲ್ಟರ್ ಡಿ ಸೋಜಾ, ಶೋಭಾ, ಫ್ರೆಂಡ್ಸ್‌ಕ್ಲಬ್‌ ಅಧ್ಯಕ್ಷ ಸುಧೀರ್‌ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಎಂ. ಸುದೀರ್‌ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಈಶ್ವರ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಈಶ್ವರ ಗೌಡ ಕೂವೆತ್ತಿಲ ಸಹಕರಿಸಿದರು.

LEAVE A REPLY

Please enter your comment!
Please enter your name here