ಫಿಲೋಮಿನಾ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮಂಗಳೂರು ವಿ.ವಿ ಕ್ರಿಕೆಟ್ ತಂಡಕ್ಕೆ ಆಯ್ಕೆ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳೂರು ವಲಯ ಹಾಗೂ ಉಡುಪಿ ವಲಯದ ಬಿ.ಸಿ ಆಳ್ವ ಹಾಗೂ ದಯಾನಂದ ಪೈ ಮೆಮೋರಿಯಲ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಸಂಪನ್ನಗೊಂಡಿದ್ದು, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಫಿಲೋಮಿನಾ ಕಾಲೇಜಿನ ಬಿಬಿಎ ವಿದ್ಯಾರ್ಥಿ ದೀಕ್ಷಿತ್ ಕುತ್ಯಾಳ, ಪ್ರಥಮ ಬಿಬಿಎ ವಿದ್ಯಾರ್ಥಿ ನಿಖಿಲ್ ಬರೆತ್, ಪ್ರಥಮ ಬಿಕಾಂ ವಿದ್ಯಾರ್ಥಿ ದತ್ತಪ್ರಸಾದ್ ಶೆಟ್ಟಿ, ಅಂತಿಮ ಬಿಕಾಂ ವಿದ್ಯಾರ್ಥಿ ಆರ್ಯನ್ ರವರು ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾಗಿದ್ದು ಈ ನಾಲ್ವರು ವಿದ್ಯಾರ್ಥಿಗಳು ಅಲೌರೌಂಡ್ ಆಟಗಾರರಾಗಿರುತ್ತಾರೆ.

ಇದರಲ್ಲಿ ದೀಕ್ಷಿತ್ ಕುತ್ಯಾಳ ವೇಗದ ಬೌಲರ್ ಹಾಗೂ ಬ್ಯಾಟರ್, ನಿಖಿಲ್ ಬರೆತ್ ಬ್ಯಾಟರ್ ಹಾಗೂ ಸ್ಪಿನ್ನರ್, ಆರ್ಯನ್ ರವರು ಮಧ್ಯಮ ವೇಗದ ಬೌಲರ್ ಹಾಗೂ ಬ್ಯಾಟರ್, ದತ್ತಪ್ರಸಾದ್ ರವರು ಬ್ಯಾಟರ್ ಹಾಗೂ ಲೆಗ್ ಸ್ಪಿನ್ನರ್ ಆಗಿರುತ್ತಾರೆ. ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ ಎಂದು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here