ಒಡಿಯೂರು ಗ್ರಾಮವಿಕಾಸ ಪಾಣಾಜೆ ವಲಯ ಕಚೇರಿ ಉದ್ಘಾಟನೆ

0

ಪಾಣಾಜೆ: ಒಡಿಯೂರು ಗ್ರಾಮ ವಿಕಾಸ ಯೋಜನೆ ಇದರ ಪಾಣಾಜೆ ವಲಯ ಕಚೇರಿಯನ್ನು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ದೀಪ ಬೆಳಗಿಸಿ ಫೆ. 28 ರಂದು ಉದ್ಘಾಟಿಸಿದರು.

ಗಡಿನಾಡ ಧ್ವನಿ‌ ಮಾಸ ಪತ್ರಿಕೆ ಸಂಪಾದಕ ಡಾ| ಹಾಜಿ. ಎಸ್. ಅಬೂಬಕ್ಕರ್ ಉಪಸ್ಥಿತರಿದ್ದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಲಯ ಮೇಲ್ವಿಚಾರಕರಾದ ಸವಿತಾ ನೆಲ್ಲಿತ್ತಡ್ಕ, ಪಾಣಾಜೆ ವಲಯ ಘಟಕ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ರೈ, ಉಪಾಧ್ಯಕ್ಷ ಭರತೇಶ್‌ ಆರ್ಲಪದವು, ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ ಬೇರಿಕೆ ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

ಪಾಣಾಜೆ ವಲಯದ ಸೇವಾ ದೀಕ್ಷಿತೆ ಗೀತಾ ಭರಣಿ ಸ್ವಾಗತಿಸಿ, ವಸಂತ್ ಕೂರುಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here