ಮರಕ್ಕಡ: ಚಿಗುರು ಅಡಿಕೆ ಬೆಳೆಗಾರರ ರೈತ ಮಹಿಳಾ ಸಂಘದಿಂದ ಹಾಳೆ ತಟ್ಟೆ ಘಟಕ ಉದ್ಘಾಟನೆ

0

ಕಾಣಿಯೂರು: ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಂದೂರು ಇದರ ಪಾಯೋಜಕತ್ವದಲ್ಲಿ ಚಿಗುರು ಅಡಿಕೆ ಬೆಳೆಗಾರರ ರೈತ ಮಹಿಳಾ ಸಂಘ ಮರಕ್ಕಡ ಅಂಗನವಾಡಿ ಕೇಂದ್ರದ ವತಿಯಿಂದ ಹಾಳೆ ತಟ್ಟೆ ಘಟಕದ ಉದ್ಘಾಟನೆಯು ಬೈತಡ್ಕದಲ್ಲಿ ನಡೆಯಿತು.

ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಉದ್ಘಾಟಿಸಿ ಶುಭಹಾರೈಸಿದರು. ಬೆಳಂದೂರು ಗ್ರಾ.ಪಂ.ಸದಸ್ಯರಾದ ವಿಠಲ ಗೌಡ ಅಗಳಿ, ಪಾರ್ವತಿ ಮರಕ್ಕಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಾವ್ಯ ಕಂಡೂರು, ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೈತಡ್ಕ, ನ್ಯಾಯವಾದಿಗಳಾದ ಶೀನಪ್ಪ ಗೌಡ ಬೈತಡ್ಕ, ಅವಿನಾಶ್ ಬೈತಡ್ಕ, ಮರಕ್ಕಡ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸರೋಜಿನಿ, ಜಯಶ್ರೀ, ಗೋಪಾಲ ಮರಕ್ಕಡ, ದಾಮೋದರ ಗೌಡ ಬೊಮ್ಮೋಡಿ, ಕೃಷಿಸಖಿ ಶೋಭಲತಾ, ಪಶುಸಖಿ ಸುಧಾ, ಎಲ್.ಸಿ.ಆರ್.ಪಿ ಸವಿತಾ, ಕೃಷಿ ಉದ್ಯೋಗಸಖಿ ದಿವ್ಯ ಹಾಗೂ ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವನಿತಾ ಬೈತಡ್ಕ ಪ್ರಾರ್ಥಿಸಿ, ಸವಿತಾ ಸ್ವಾಗತಿಸಿದರು. ವನಜ ಬೈಥಡ್ಕ ವಂದಿಸಿ, ಪಾರ್ವತಿ ಬೊಮ್ಮೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here