ಶಾಂತಿನಗರದಲ್ಲಿ ಪೂಜಾ ಕಟ್ಟೆ ಲೋಕಾರ್ಪಣೆ, 35ನೇ ವರ್ಷದ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಸಂಭ್ರಮ

0

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಪೂಜಾ ಮೈದಾನದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ೩೫ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ವೃತ ಪೂಜೆ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಮಾ.೪ರಂದು ನಡೆಯಿತು.

ಪೂಜಾ ಮೈದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಪೂಜಾ ಕಟ್ಟೆಯನ್ನು ಬೆಳಿಗ್ಗೆ ಲೋಕಾರ್ಪಣೆ ಮಾಡಲಾಯಿತು.‌ ಅರ್ಚಕ ಬಾಲಕೃಷ್ಣ ಐತಾಳ್ ನೇತೃತ್ವದಲ್ಲಿ ಗಣಹೋಮ ಮುಂತಾದ ಧಾರ್ಮಿಕ‌ ವಿಧಿವಿಧಾನದೊಂದಿಗೆ ಪೂಜಾ ಕಟ್ಟೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಜೆ 35ನೇ ವರ್ಷದ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಚಲನಚಿತ್ರ ಹಂಚಿಕೆದಾರ ಕುಕ್ಕಾಡಿ ಬಾಲಕೃಷ್ಣ ಶೆಟ್ಟಿ ಸಂಯೋಜಕತ್ವದಲ್ಲಿ ಕೊಡಗಿನ ಮ್ಯಾಜಿಕ್ ಸ್ಟಾರ್ ಜಾದೂಗಾರ್ ವಿಕ್ರಂ ಶೆಟ್ಟಿಯವರಿಂದ ಮಾಯಾ ಮ್ಯಾಜಿಕ್ ನಡೆಯಿತು.

LEAVE A REPLY

Please enter your comment!
Please enter your name here