ಮಡ್ಯಂಗಳ ಕರ್ಕೇರ ಕುಟುಂಬದ ತರವಾಡು ಮನೆಯಲ್ಲಿ ನೇಮೋತ್ಸವ

0

ಅರಿಯಡ್ಕ: ಮೂಲ ಕೆಮ್ಮಣ್ಣ ಬೈಲು ಅಳದಂಗಡಿ, ನಾಗ ದೇವರು, ಧೂಮಾವತಿ ಮತ್ತು ಪರಿವಾರ ದೈವಗಳ ಮಡ್ಯಂಗಳ ಕರ್ಕೇರಾ ತರವಾಡು ಇದರ ವತಿಯಿಂದ ಮಾ.4ರಿಂದ ಮಡ್ಯಂಗಳ ಕರ್ಕೇರ ಕುಟುಂಬಸ್ಥರ ತರವಾಡು ಮನೆಯಲ್ಲಿ

ಗಣಹೋಮ, ಶುದ್ಧಿ ಕಲಶ, ಶ್ರೀಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರಿಗೆ ಹರಿಸೇವೆ, ಮುಡಿಪು ಕಾಣಿಕೆ, ರಾಹುಗುಳಿಗ ತಂಬಿಲ, ಹಾಗೂ ಗುಳಿಗ ದೈವ, ಸತ್ಯದೇವತೆ ಕಲ್ಲುರ್ಟಿ ದೈವ, ಕುಪ್ಪೆಪಂಜುರ್ಲಿ ದೈವ, ಕಲ್ಲಾಲ್ದ ಗುಳಿಗದೈವ, ವರ್ಣರ ಪಂಜುರ್ಲಿ ದೈವ, ಮತ್ತು ಧೂಮಾವತಿ ದೈವದ ನೇಮೋತ್ಸವ ನಡೆಯಿತು.

ಕುಟುಂಬದ ಯಜಮಾನ ಬೇಳ ಸಂಕಪ್ಪ ಪೂಜಾರಿ, ಆಡಳಿತ ಸಮಿತಿ, ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here