ಕೊಕ್ಕಡ: ಜೇಸಿ ಆಡಳಿತ ತರಬೇತಿ

0

ಲಕ್ಷ ಸದಸ್ಯರ ಸೇರ್ಪಡೆಗೆ ಯತ್ನ: ಭರತ್ ಶೆಟ್ಟಿ

ನೆಲ್ಯಾಡಿ: ಜೇಸಿ ಸಂಸ್ಥೆಯಲ್ಲಿ ಈ ವರ್ಷ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಒಂದು ಲಕ್ಷ ಯುವ ಸದಸ್ಯರನ್ನು ನೋಂದಣಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜೇಸಿ ವಲಯ 15ರ ಸಿ. ಪ್ರಾಂತ್ಯದ ವಲಯ ಉಪಾಧ್ಯಕ್ಷ ಭರತ್ ಶೆಟ್ಟಿ ಹೇಳಿದರು.

ಅವರು ಕೊಕ್ಕಡ ಮರಿಯಾಕೃಪಾ ಕಚೇರಿಯಲ್ಲಿ ಮಾ.4ರಂದು ಘಟಕಾಡಳಿತ ಹಾಗೂ ನಿರ್ವಹಣೆ ಕುರಿತು ಜರಗಿದ ತರಬೇತಿ ಶಿಬಿರದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಒಂದು ಸಂಸ್ಥೆಯು ಯಶಸ್ವಿ ಆಗಬೇಕಾದರೆ ಎಲ್ಲಾ ಪದಾಧಿಕಾರಿಗಳು ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು. ಆಡಳಿತ, ತರಬೇತಿ, ಸಮುದಾಯ ಅಭಿವೃದ್ಧಿ, ವ್ಯವಹಾರ ಮುಂತಾದ ಸೇವಾ ಕ್ಷೇತ್ರದಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸುವಂತೆ ಕರೆ ನೀಡಿದರು. ಕೊಕ್ಕಡ ಜೇಸಿ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮಾರ್ಚ್ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಸದಸ್ಯರನ್ನು ಅಭಿನಂದಿಸಲಾಯಿತು.

ಆಡಳಿತ ವಿಭಾಗದ ಉಪಾಧ್ಯಕ್ಷ ಯು.ನರಸಿಂಹ ನಾಯಕ್, ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರಿಗೆ ಕ್ರಮವಾಗಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮಾಡಿದ ಉತ್ತಮ ಸಾಧನೆಗೆ “ಜೇಸಿ ಆಫ್‌ದ ಮಂತ್” ಎಂದು ಪಿನ್ ನೀಡಿ ಅಭಿನಂದಿಸಲಾಯಿತು. ಮಹಿಳಾ ಜೇಸಿ ಅಧ್ಯಕ್ಷೆ ದೀಪಾ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ್ ರಾವ್, ಉಪಾಧ್ಯಕ್ಷ ರಾಜಾರಾಮ, ಜಸ್ವಂತ್ ಪಿರೇರಾ ಅವರು ತರಬೇತಿ ಕುರಿತು ಅನಿಸಿಕೆ ತಿಳಿಸಿದರು. ಹಿರಿಯ ಸದಸ್ಯ ಜೋಸೆಫ್ ಪಿರೇರಾ, ಕೌಕ್ರಾಡಿ ಸಂತ ಜಾನರ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿ ಸೋಜ ಅವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here