ಕಟ್ಟತ್ತಾರು ದೇವಿಕೆರೆ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ದೇವಿಕೆರೆ ರಸ್ತೆಯ ನಾಗರಿಕರ ಬಹು ವರ್ಷಗಳ ಬೇಡಿಕೆ ರಸ್ತೆಯ ಕಾಂಕ್ರಿಟೀಕರಣಕ್ಕೆ  ಕರ್ನಾಟಕ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರ ವಿಶೇಷ ಅನುದಾನದಲ್ಲಿ ಸುಮಾರು 10 ಲಕ್ಷ ರೂ ವೆಚ್ಚದ ಕಾಂಕ್ರಿಟೀಕರಣದ ರಸ್ತೆಗೆ  ದ.ಕ.ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ತೆಂಗಿನಕಾಯಿ ಒಡೆಯುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಕೆಯ್ಯೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ಗುದ್ದಲಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಅನುದಾನಕ್ಕೆ ಸಹಕರಿಸಿದ ಬಿಜೆಪಿ ಕೆಯ್ಯೂರು  ಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್ ಆಳ್ವ ಇಳಂತಾಜೆ, ಸದಸ್ಯರಾದ ಶರತ್ ಕುಮಾರ್ ಮಾಡಾವು,  ಮಮತಾ ರೈ ಕೆಯ್ಯೂರು, ಬೂತ್ ಅಧ್ಯಕ್ಷ ಶರತ್ ಕುಮಾರ್ ರೈ ದೇರ್ಲ,  ಕೆಯ್ಯೂರು ಗ್ರಾ.ಪಂ. ಸದಸ್ಯರಾದ  ಮೀನಾಕ್ಷಿ.ವಿ.ರೈ ಮಾಡಾವು, ಶುಭಾಷಿಣಿ ಸಣಂಗಳ, ವಿಜಯ ಕುಮಾರ್ ಸಣಂಗಳ, ತಾರಾನಾಥ ಪೂಜಾರಿ ಕಂಪ, ಮೋಹನ್ ರೈ ಬೇರಿಕೆ, ರಾಧಕೃಷ್ಣ ಗೌಡ ಕೆಯ್ಯೂರು, ರಘುನಾಥ ಗೌಡ ಕೆಯ್ಯೂರು, ಸಿಪ್ರಿಯನ್ ಡಿ.ಸೋಜ, ಸೆಲಿನ್ ಡಿ.ಸೋಜ, ಪ್ರಿಯಾ ಡಿ.ಸೋಜ, ಪೌಲ್ ಡಿ.ಸೋಜ, ಬಾಬು ಕುಲಾಲ್, ಹೊನ್ನಪ್ಪ ಕುಲಾಲ್, ಸರಸ್ವತಿ, ಕುಸುಮಾ, ರಾಹುಲ್, ಅಶೋಕ, ದೇವಕಿ, ಸ್ವಾತಿ, ಚಾರ್ವಿ, ಪ್ರಮೀತ್ ಕಟ್ಟತ್ತಾರು, ಬಾಲಕೃಷ್ಣ ಕಟ್ಟತ್ತಾರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here