ಜಾತ್ರಾ ಬಟ್ಟೆ ವ್ಯಾಪಾರಿಗೆ ಹಲ್ಲೆ -ದೂರು

0

ಪುತ್ತೂರು:ಜಾತ್ರೆಗಳಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ ಮೂರು ಮಂದಿ ಹಲ್ಲೆ ನಡೆಸಿದ ಘಟನೆ ಈಶ್ವರಮಂಗಲದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನೆಟ್ಟಣಿಗೆಮುಡ್ನೂರು ಗ್ರಾಮದ ಸರ್ವತ್ತೋಡಿ ನಿವಾಸಿ ಶಶಿಧರ ಪೂಜಾರಿ(30ವ)ರವರು ಹಲ್ಲೆಗೊಳಗಾದವರು. ಅವರು ಜಾತ್ರೆಗಳಲ್ಲಿ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದು, ನೆಟ್ಟಣಿಗೆ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಬಟ್ಟೆ ಅಂಗಡಿ ಇಡುವ ಸಲುವಾಗಿ ಬಟ್ಟೆ ಖರೀದಿಸಲು ಈಶ್ವರಮಂಗಲಕ್ಕೆ ಬಂದಿದ್ದ ವೇಳೆ ಸಂಜನ್ ರೈ ಮೇನಾಲ ಸಹಿತ ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here