![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಪೂರ್ವ ಪದ್ಧತಿ ಪ್ರಕಾರ ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
![](https://puttur.suddinews.com/wp-content/uploads/2023/03/e891a8c8-0728-4385-9838-db5b4a621b70.jpg)
ಮಾ.10 ರಂದು ಬೆಳಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ. 11 ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಕನ್ನಡ್ಕ ತರವಾಡು ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ತರಲಾಯಿತು. ರಾತ್ರಿ 7.30ರಿಂದ ಪಡುಮಲೆ ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ಕಟ್ಟೆಪೂಜೆ, ಧ್ವಜಾವರೋಹಣ, ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ, ಮಂತ್ರಾಕ್ಷತೆ ಬಳಿಕ ಗುಳಿಗ ದೈವದ ನೇಮ ನಡೆಯಿತು.
![](https://puttur.suddinews.com/wp-content/uploads/2023/03/WhatsApp-Image-2023-03-10-at-12.12.19.jpeg)
ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶೀನಿವಾಸ ಭಟ್ ಸಿ.ಯಚ್, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಭಟ್, ಬ್ರಹ್ಮಕಲಶೋತ್ಸವ ಅರ್ಥಿಕ ಸಮಿತಿ ಸದಸ್ಯ ವೇಣುಗೋಪಾಲ ಭಟ್ ಮಾಜಿ ಅಧ್ಯಕ್ಷ ಸಂಜೀವ ರೈ ಕೆಳಗಿನ ಪೇರಾಲು, ಸದಸ್ಯರಾದ ದಯಾ ವಿ.ರೈ ಬೆಳ್ಳಿಪ್ಪಾಡಿ, ರವಿರಾಜ ರೈ ಸಜಂಕಾಡಿ, ಚಿದಾನಂದ ಗೌಡ, ಸಾರಕುಟೇಲು, ಶ್ರೀಧರ ಎನ್ ನೇರ್ಲಪ್ಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮುಲೆ ಮತ್ತು ಪ್ರಮುಖರಾದ ತಿಲೋತ್ತಮಾ ರೈ, ಗಣೇಶ ರೈ ಮುಳಿಪಡ್ಪು, ಅನಗ್ ಆಳ್ವ ಮೂಡಾಯೂರು, ಅಯಾಗ್ ಅಳ್ವ ಮೂಡಾಯೂರು, ಬಾಲಚಂದ್ರ ರೈ ಬೆದ್ದರ್ಮಾರ್, ಪಡುಮಲೆ ಸೇನೆರ್ ಲಕ್ಷ್ಮೀ ನಾರಾಯಣ ರಾವ್, ರಾಮಣ್ಣ ಗೌಡ ಕರ್ಪುಡಿಕಾನ, ಅನಂತ್ ರೈ ಮೂಡಾಯೂರು, ಅಮ್ಮಣ್ಣ ರೈ ಪಾಪೆಮಜಲು, ನಾರಾಯಣ ಗೌಡ ಕನ್ನಡ್ಕ ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.
![](https://puttur.suddinews.com/wp-content/uploads/2023/03/1fbd5ed0-849d-4709-9d26-8a023c167208.jpg)
![](https://puttur.suddinews.com/wp-content/uploads/2023/03/9d0ad1b6-8701-4c26-aa61-565860c182af.jpg)