ಬೆಳಂದೂರು ಗ್ರಾ.ಪಂ.ಗೆ ಹೊಸ ಕಟ್ಟಡದ ಭಾಗ್ಯ ; ಇಂದು(ಮಾ.13) ಸಚಿವ ಎಸ್ ಅಂಗಾರರಿಂದ ಶಿಲಾನ್ಯಾಸ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ಇದರ ನೂತನ ಕಟ್ಟಡಕ್ಕೆ ಮಾ 13ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ಸಚಿವ ಎಸ್ ಅಂಗಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕುದ್ಮಾರು ಕಾಯಿಮಾಣ, ಬೆಳಂದೂರು ಗ್ರಾಮಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಟ್ಟಡ ಸುಮಾರು 50 ವರ್ಷಗಳಷ್ಟು ಹಳೆಯದ್ದು. ಇಲ್ಲಿನ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಗ್ರಾಮ ಪಂಚಾಯತ್ ಗೆ ಹೊಸ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇದ್ದುದರಿಂದ ಇದೀಗ ನರೇಗಾ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅನುದಾನದಿಂದ ಸುಮಾರು ರೂ.40ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡದ ನಿರ್ಮಾಣವಾಗಲಿದ್ದು, ಆ ಮೂಲಕ ಬಹುದಿನದ ಕನಸು ನನಸಾಗಲಿದೆ.

ಬೆಳಂದೂರು ಗ್ರಾಮ ಪಂಚಾಯತ್ ಗೆ ಸುಸಜ್ಜಿತ ಕಟ್ಟಡ ಆಗಬೇಕು ಎನ್ನುವುದು ಗ್ರಾಮಸ್ಥರ ಬಹು ದಿನದ ಬೇಡಿಕೆಯಾಗಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಮಾ 13ರಂದು ಸಚಿವ ಎಸ್ ಅಂಗಾರ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಲೋಹಿತಾಕ್ಷ ಕೆಡೆಂಜಿಕಟ್ಟ
ಅಧ್ಯಕ್ಷರು, ಗ್ರಾ. ಪಂ. ಬೆಳಂದೂರು

LEAVE A REPLY

Please enter your comment!
Please enter your name here