ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆ: ಚಿಕಿತ್ಸೆಗೆ ಕ್ಯಾಂಪ್ಕೊ ನೆರವು

0

ಪುತ್ತೂರು: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ಅನುಗ್ರಹ ಮನೆಯ ಮೋಹನಚಂದ್ರ ಬೋರ್ಕರ್‌ರವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಅವರ ಪುತ್ರಿ ಅಂಕಿತಾರವರಿಗೆ ಹಾಗೂ ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಅಂಗಡಿಹಿತ್ತಿಲು ಬಾಲಕೃಷ್ಣ ಗೌಡರವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ತಲಾ ರೂ. 50,000ದ ಸಹಾಯಧನ ನೀಡಲಾಯಿತು.

ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲರವರು ಚೆಕ್ ಹಸ್ತಾಂತರಿಸಿದರು.ARDFನ ಕೇಶವ ಭಟ್, ಕ್ಯಾಂಪ್ಕೊ ಪುತ್ತೂರು ಶಾಖಾಧಿಕಾರಿ ಅಮರೇಶ ಪಿ., ಡೆಪ್ಯುಟಿ ಮ್ಯಾನೇಜರ್ ಉಷಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here