ಅಭಿವೃದ್ಧಿಯಾಗದ ರಸ್ತೆ-ಮತದಾನ ಬಹಿಷ್ಕಾರದ ಬ್ಯಾನರ್

0

ಆಲಂಕಾರು:ರಸ್ತೆ ಡಾಮರೀಕರಣ ಯಾ ಕಾಂಕ್ರಿಟೀಕರಣ ಕುರಿತ ತಮ್ಮ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಸ್ಥಳೀಯ ನಾಗರಿಕರು ಚುನಾವಣೆ ಬಹಿಷ್ಕರಿಸುವ ಕುರಿತು ಬ್ಯಾನರ್ ಅಳವಡಿಸಿರುವ ಘಟನೆ ಆಲಂಕಾರುವಿನಿಂದ ವರದಿಯಾಗಿದೆ.

ಆಲಂಕಾರು ಗ್ರಾಮದ ಶರವೂರು ನಗ್ರಿ ಕಂದ್ಲಾಜೆ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಬುಡೇರಿಯಾ ಕ್ರಾಸ್ ಕಂದ್ಲಾಜೆ, ನಗ್ರಿ ಶರವೂರು ರಸ್ತೆಯು ತೀರಾ ಹದಗೆಟ್ಟಿದ್ದು ನಡೆದಾಡಲೂ ಸಾಧ್ಯವಿಲ್ಲವಾಗಿದೆ. ರಸ್ತೆ ಅಭಿವೃದ್ಧಿ ಕುರಿತ ತಮ್ಮ ಬೇಡಿಕೆ ಇನ್ನೂ ಈಡೇರದೇ ಇರುವುದರಿಂದ, ಈ ರಸ್ತೆ ಡಾಮರೀಕರಣ ಇಲ್ಲವೇ ಕಾಂಕ್ರಿಟೀಕರಣ ಆಗುವವರೆಗೆ ನಾವು ಯಾವುದೇ ಚುನಾವಣೆಯಲ್ಲಿ ಭಾಗವಹಿಸದೆ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಕಂದ್ಲಾಜೆ, ನಗ್ರಿ, ಶರವೂರಿನ ನೊಂದ ಮತದಾರರು' ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ.

ಭರವಸೆ ನಿಲ್ಲಿಸಿ-ವ್ಯವಸ್ಥೆ ಕಲ್ಪಿಸಿ’ ಎಂದು ಮತದಾರರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here