ಗೋಳಿತ್ತಡಿ-ಏಣಿತ್ತಡ್ಕ ರಸ್ತೆ ಕಾಮಗಾರಿ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳಿಂದ ಪರಿಶೀಲನೆ

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಮತ್ತು ಕೊಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ನೆಲ್ಯೊಟ್ಟು ಎಂಬಲ್ಲಿಂದ ತ್ರಿವೇಣಿ ಸರ್ಕಲ್ ತನಕ ನಡೆದ ರಸ್ತೆ ಕಾಮಗಾರಿಯನ್ನು ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಪರಿಶೀಲನೆ ನಡೆಸಿದರು.

ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಶಾಸಕರ 4 ಲಕ್ಷ ರೂ., ಅನುದಾನದಲ್ಲಿ ತೇಪೆ ಕಾಮಗಾರಿ ಮುಗಿದಿದ್ದು ಬಳಿಕದ ರಸ್ತೆ ತೇಪೆ ಕಾರ್ಯಕ್ಕೆ ಕ್ಷೇತ್ರದ ಶಾಸಕರೂ ಆದ ಸಚಿವ ಎಸ್. ಅಂಗಾರರವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ ಸುಮಾರು 2 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ನಡೆಯುತ್ತಿದೆ.

ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ ಪಾನ್ಯಾಲು, ಯತೀಶ್ ಸೀಗೆತ್ತಡಿ, ಪುಷ್ಪಾ, ಭಾರತಿ, ಕಡಬ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಯಂತಿ ಅರ್ ಗೌಡ, ಬಿಜೆಪಿ ಮುಖಂಡರಾದ ಸುಭಾಶ್ ಶೆಟ್ಟಿ, ಸುದೀಶ್ ಪಟ್ಟೆ, ಉದಯ ಕುಮಾರ್ ಏಣಿತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here