ರೋಟರಿ ಸೆ೦ಟ್ರಲ್ ವತಿಯಿಂದ ಬಾಲವನ ಅಂಗನವಾಡಿಯಲ್ಲಿ ನೀರಿನ ಘಟಕ ಉದ್ಘಾಟನೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಂದ ಶಿವರಾಮ ಕಾರಂತರ ಬಾಲವನ ಅಂಗನವಾಡಿ ಕಟ್ಟಡಕ್ಕೆ ಸಂಪೂರ್ಣ ಪೈಂಟ್ ಕೆಲಸ ಪೂರ್ತಿಗೊಳಿಸಿ, ಬಾಲವನ ಅಂಗನವಾಡಿಗೆ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕೊಡುಗೆ ಯೋಜನೆಯ ಉದ್ಘಾಟನೆಯು ಇತ್ತೀಚೆಗೆ ನೆರವೇರಿತು.

ರೋಟರಿ ಜಿಲ್ಲೆ 3181 ವಲಯ 5 ರ ಅಸಿಸ್ಟೆಂಟ್ ಗವರ್ನರ್ ಎ. ಜಗಜೀವನ್ ದಾಸ್ ರೈ ಯವರು ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ರೋಟರಿ ಸೆಂಟ್ರಲ್ ಅದ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆ ನಿರ್ವಹಿಸಿದರು.


ಈ ಸಂದರ್ಭದಲ್ಲಿ ಅಂಗನವಾಡಿಗೆ ರೋಟರಿ ಮೂಲಕ ನೀರಿನ ಘಟಕ ಮತ್ತು ಸುಣ್ಣ ಬಣ್ಣ ಬಳಿಯಲು ಸಹಕರಿಸಿದ ನಿವೃತ್ತ ಉಪನ್ಯಾಸಕ ದಿ||ಜನಾರ್ದನ ಪಿ ಯವರ ಕುಟುಂಬಿಕರ ಸಹಕಾರವನ್ನು ಶ್ಲಾಘಿಸಿಲಾಯಿತು.ಕಳೆದ ತಿಂಗಳು ಫೆಬ್ರವರಿ ಹದಿನಾಲ್ಕನೇ ತಾರೀಕಿನಂದು ದಿ||ಜನಾರ್ದನ ಪಿ ಹೆಸರಲ್ಲಿ ರೋಟರಿ ಕ್ಲಬ್ ಸೆ೦ಟ್ರಲ್ ಮೂಲಕ ಸಾಲ್ಮರ ಸರಕಾರಿ ಶಾಲೆಗೆ ನೀರಿನ ಘಟಕವನ್ನು ನೀಡಿರುವುದನ್ನು ಮತ್ತು ರೋಟರಿ ಸೆಂಟ್ರಲ್ ಮೂಲಕ ಕಳೆದ ತಿಂಗಳು ಬಾಲವನಕ್ಕೆ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ರೋಟರಿ ವಲಯ ಸೇನಾನಿ ಹರ್ಷಕುಮಾರ್ ರೈ ಯವರು ರೋಟರಿ ಕ್ಲಬ್ ಸೆಂಟ್ರಲ್ ಮೂಲಕ ನೀಡಿರುವುದನ್ನು ಅಧ್ಯಕ್ಷರಾದ ರಫೀಕ್ ದರ್ಬೆರವರು ಸ್ಮರಿಸಿ ಅಭಿನಂದಿಸಿದರು, ಚಪ್ಪಲ್ ಬಜ಼ಾರ್ ನವರು ನೀಡಿದ ಚಪ್ಪಲಿಗಳನ್ನ ಅಂಗನವಾಡಿ ಮಕ್ಕಳಿಗೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್3181ವಲಯ 5ರ ವಲಯ ಸೇನಾನಿ ಹರ್ಷಕುಮಾರ್ ರೈ, ಸ್ಥಳಿಯ ನಗರಸಭಾ ಸದಸ್ಯರಾದ ದೀಕ್ಷಾ ಪೈ,ರೋಟರಿ ಸೆಂಟ್ರಲ್ ನ ಕಾರ್ಯದರ್ಶಿ ಚಂದ್ರಹಾಸ ರೈ. ಬಿ,ನಿಯೋಜಿತ ಅದ್ಯಕ್ಷ ಡಾ| ರಾಜೇಶ್ ಬೆಜ್ಜಂಗಳ,ಪೂರ್ವಾಧ್ಯಕ್ಷ ನವೀನ್ ಚಂದ್ರ ನಾಯ್ಕ್, ಸ್ಥಾಪಕಾದ್ಯಕ್ಷ ಸಂತೋಷ್ ಶೆಟ್ಟಿ,ಕೋಶಾಧಿಕಾರಿ ಡಾ| ರಾಮಚಂದ್ರ , ಸಾರ್ಜೆಂಟ್‌ ಜಯಪ್ರಕಾಶ್ ಅಮೈ, ಪುರುಷೋತ್ತಮ ಶೆಟ್ಟಿ, ಉಪಕಾರ್ಯದರ್ಶಿ ಜಯಪ್ರಕಾಶ್ ಎ ಎಲ್. ಕ್ಲಬ್ ಸರ್ವಿಸ್ ಚಯರ್ಮೇನ್ ಅಶ್ರಫ್ ಮುಕ್ವೆ,ಸದಸ್ಯರಾದ ಪ್ರದೀಪ್ ಪೂಜಾರಿ, ಅಂಗನವಾಡಿ ಟೀಚರ್ ಗೀತಾ, ಅಂಗನವಾಡಿ ಸಹಾಯಕಿ ಸುಮ, ಮತ್ತು ಪೊಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.


,ರೋಟರಿ ಸೆ೦ಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ ಕಾರ್ಯಕ್ರಮ ನಿರ್ವಹಿಸಿ, ಪುರುಷೋತ್ತಮ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here