ಕೌನ್ಸಿಲರ್ ಶಿವರಾಮ್ ರವರಿಗೆ ಶೃದ್ದಾಂಜಲಿ

0

ಪುತ್ತೂರು: ಇತ್ತೀಚಿಗೆ ನಿಧನರಾದ ಪುತ್ತೂರು ನಗರಸಭೆಯ ಒಂದನೇ ವಾರ್ಡಿನ ಕೌನ್ಸಿಲರ್ ಶಿವರಾಮ್ ಸಪಲ್ಯರವರಿಗೆ ಶಿವಮಣಿ ಕಲಾ ಸಂಘ ಶಿವನಗರ,ಕಲ್ಲೇಗ ಇದರ ವತಿಯಿಂದ ಮಾ.19 ರಂದು ರಕ್ತೇಶ್ವರೀ ವಠಾರ ಅಂಗವಾಡಿ ಸಮೀಪ ಶೃದ್ದಾಂಜಲಿ ನುಡಿನಮನ ನೆರವೇರಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ನೆರವೇರಿಸಲಾಯಿತು.

ಶಿವಮಣಿ ಕಲಾ ಸಂಘ ಸಂಚಾಲಕ ಮನು ಕುಮಾರ್, ನೂತನ ಅಧ್ಯಕ್ಷರಾದ ಸುದರ್ಶನ್, ಉಪಾದ್ಯಕ್ಷ ಕೃಷ್ಣಪ್ಪಕಲಾವಿದ, ಸದಸ್ಯರಾದ ರೋಹಿಣಿ ಅಚಾರ್ಯ ನುಡಿನಮನ ಸಲ್ಲಿಸಿದರು.

ಪುತ್ತೂರು ತಾ. ಸಾಹಿತ್ಯ ಪರಿಷತ್ ಘಟಕದ ಅದ್ಯಕ್ಷ ಉಮೇಶ ನಾಯಕ್, ತಾಲೂಕು ಯುವಜನ ಒಕ್ಕೂಟದ ಅದ್ಯಕ್ಷ ದಿನೇಶ್ ಸಾಲ್ಯಾನ್, ಶಿವಮಣಿ ಕಲಾ ಸಂಘದ ನಿಕಟಪೂರ್ವ ಅದ್ಯಕ್ಷ ದೀಪಕ್ ಪೈ ಉಪ್ಪಿನಂಗಡಿ ಹಾಗೂ ಸ್ಥಳೀಯ ಮುಂದಾಳು ಶಂಕರ್ ರವರು ಸಂದರ್ಭೋಚಿತವಾಗಿ ಮಾತನಾಡಿದರು.

ಮಹಾ ಶಿವರಾತ್ರಿ ಪ್ರಯುಕ್ತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ಚಿತ್ರರಚನೆ ಸ್ಪರ್ದೆ ಬಹುಮಾನ ವಿತರಿಸಲಾಯಿತು.


ಸಂಚಾಲಕ ಮನುಕುಮಾರ್ ಕಾರ್ಯಕ್ರಮ ನಿರ್ವಹಿಸಿದರು

LEAVE A REPLY

Please enter your comment!
Please enter your name here