ನಿವೃತ್ತ ಉಪತಹಶೀಲ್ದಾರ್ ನಂದಿಲ ನಿವಾಸಿ ಬಾಲಣ್ಣ ಹೃದಯಾಘಾತದಿಂದ ನಿಧನ

0

ಪುತ್ತೂರು: ಉಪತಹಶೀಲ್ದಾರ್ ನಂದಿಲ ನಿವಾಸಿ ಬಾಲಣ್ಣ(68ವ)ರವರು ಮಾ.22ರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು.


ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಅವರು ನಿವೃತ್ತಿಯ ಕೊನೆಗೆ ಉಪತಹಶೀಲ್ದಾರ್ ಆಗಿ ಮುಂಭಡ್ತಿ ಕಡಬಕ್ಕೆ ವರ್ಗಾವಣೆಗೊಂಡು ಸುಮಾರು 6 ತಿಂಗಳು ಕರ್ತವ್ಯ ನಿರ್ವಹಿಸಿ ಅಲ್ಲೇ ನಿವೃತ್ತಿಯಾಗಿದ್ದರು.

ಬನ್ನೂರು ನಂದಿಲ ನಿವಾಸಿಯಾಗಿರುವ ಅವರು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ನಿವೃತ್ತ ಮುಖ್ಯಗುರು ಪುಷ್ಪಾವತಿ, ಪುತ್ರರಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಾಜೇಶ್ ಮತ್ತು ಬೆಂಗಳೂರಿನಲ್ಲಿರುವ ಮಹೇಶ್ ಹಾಗು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here