ಕುದ್ಕಾಡಿ ಶ್ರೀ ಧರ್ಮದೈವ ವರ್ಣಾರ ಪಂಜುರ್ಲಿ ಹಾಗೂ ಪರಿವಾರ ದೈವದ ನೇಮೋತ್ಸವ

0

ಬಡಗನ್ನೂರು: ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮತ್ತು ಶ್ರೀ ಧರ್ಮದೈವ ವರ್ಣಾರ ಪಂಜುರ್ಲಿ ಮತ್ತು ಪರಿವಾರದೈವಗಳ ನೇಮೋತ್ಸವವು ಮಾ. 24 ಮತ್ತು 25ರಂದು ನಡೆಯಿತು. ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಮಹಾಲಿಂಗ ಭಟ್ಟರವರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.


ಮಾ 25 ರಂದು ಪ್ರಾತಃಕಾಲ ಗಂ 4 ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ, ಸಂಚಾರ ಗುಳಿಗ ದೈವದ ನೇಮ. ಸಂಜೆ ಗಂ 7.30 ಕ್ಕೆ ತರವಾಡು ಮನೆಯಿಂದ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ನಡೆಯಿತು. . ರಾತ್ರಿ ಗಂ 9 ರಿಂದ ದೇವತೆ , ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಮತ್ತು ಸ್ಥಳದ ಗುಳಿಗ ದೈವಗಳ ನೇಮ ನಡೆಯಿತು.


ಈ ಸಂದರ್ಭದಲ್ಲಿ ಕುದ್ಕಾಡಿ ಕುಟುಂಬದ ಯಜಮಾನ ಬಾಲಕೃಷ್ಣ ರೈ ಮತ್ತು ಕುದ್ಕಾಡಿ ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here