ಇಂದಿನಿಂದ (ಮಾ.27) ಮಾ. 29ರವರೆಗೆ ಪಣೆಮಜಲು ಶ್ರೀ ಮಲೆ ಉಳ್ಳಾಕ್ಲು ಮತ್ತು ಸಪರಿವಾರ ದೈವಗಳ ನೇಮೋತ್ಸವ-ಧಾರ್ಮಿಕ ಕಾರ್ಯಕ್ರಮ

0

ಕಡಬ: ಇಲ್ಲಿನ ಪಣೆಮಜಲು ಶ್ರೀ ಮಲೆ ಉಳ್ಳಾಕ್ಲು ಶ್ರೀ ಮಲೆ ಚಾಮುಂಡಿ, ಶ್ರೀ ಪುರುಷ ದೈವ ಸಪರಿವಾರ ದೈವಗಳು ಮತ್ತು ಕಡಬದ ಪಂಜುರ್ಲಿ ದೈವಗಳ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ಮಾರ್ಗದರ್ಶನದಲ್ಲಿ ಮಾ.27ರಿಂದ ಮಾ.29ರವರೆಗೆ ನಡೆಯಲಿದೆ.

ಮಾ.27ರಂದು ಬೆಳಿಗ್ಗೆ ಶ್ರೀ ನಾಗದೇವರಿಗೆ ತಂಬಿಲ, ಕೆದಂಬಾಡಿಯಲ್ಲಿ ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ, ಬಳಿಕ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ಶ್ರೀ ದೇವಿಗೆ ಮಹಾಪೂಜೆ, ಕಲ್ಮಲೆ ಗುಡ್ಡೆಯಲ್ಲಿ ಶ್ರೀ ದೈವಗಳಿಗೆ ಪೇರಾರಿ ಇಟ್ಟು ಪ್ರಾರ್ಥನೆ, ಮಧ್ಯಾಹ್ನ ತುಂಬೆತ್ತಡ್ಕದಲ್ಲಿ ಶ್ರೀ ಪುರುಷ ದೈವ, ಜುಮ್ರೋಳು ಹಾಗೂ ಗುರುಕಾರ್ನರವರಿಗೆ ಅಗೇಲು ಹಾಕುವುದು.

ಮಾ.28ರಂದು ಸಂಜೆ ದೈವಗಳ ಭಂಡಾರ ಚಾವಡಿಯಿಂದ ಭಂಡಾರ ಇಳಿಸಿ ಮಾಲೈ ಮಾಡದಲ್ಲಿ ಭಂಡಾರ ಏರುವುದು. ಬಳಿಕ ಅನ್ನಸಂತರ್ಪಣೆ, ರಾತ್ರಿ ಶ್ರೀ ಮಲೆ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮ ಪ್ರಾರಂಭ.

ಮಾ.29ರಂದು ಬೆಳಿಗ್ಗೆ ಶ್ರೀ ಮಲೆ ಚಾಮುಂಡಿ ಪ್ರಧಾನಿ ದೈವದ ನೇಮ ಮತ್ತು ಹರಕೆ ಸಲ್ಲಿಸಿದ ಬಳಿಕ ಗಡಿಗೆ ತೆರಳುವುದು. ಮಧ್ಯಾಹ್ನ ಕಡಬದ ಪಂಜುರ್ಲಿ ದೈವದ ನೇಮ, ನೇಮ ಮುಗಿದು ಭಂಡಾರ ಚಾವಡಿಗೆ ಹಿಂತಿರುಗುವುದು ಎಂದು ಪಣೆಮಜಲು ಕುಟುಂಬದ ಮುಖ್ಯಸ್ಥ ಜನಾರ್ದನ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here