ಮಾ 29, 30- ಕೆಳಗಿನಕೇರಿ ಕೊಪ್ಪ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ

0

ಕಾಣಿಯೂರು : ಚಾರ್ವಾಕ ಕೆಳಗಿನಕೇರಿ ಕೊಪ್ಪ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವವು ಮಾ 29 ಮತ್ತು 30ರಂದು ನಡೆಯಲಿದೆ.

ಮಾ 29ರಂದು ಬೆಳಿಗ್ಗೆ ನಾಗಬ್ರಹ್ಮ ಸಾನಿಧ್ಯದಲ್ಲಿ ತಂಬಿಲ. ಗಣಹೋಮ ಕೊಪ್ಪ ಭಂಡಾರದ ಮನೆಯಲ್ಲಿ ನವಕ ಕಲಶಾಭಿಷೇಕ, ರಾತ್ರಿ ಕೊಪ್ಪ ಪಾಜೋವುತ್ತಡ್ಕ ಮಾಲ್ಯದಿಂದ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾ 30ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರದೀಪ್ ಆರ್ ಗೌಡ ಅರುವಗುತ್ತು, ಕೊರಗಪ್ಪ ಕುಂಬಾರ ಗೌಡ ಮನೆ, ವೆಂಕಪ್ಪ ಕುಂಬಾರ ಬಾರಿಕಳ ಮನೆ, ವಸಂತ ಕುಂಬಾರ ಬುದ್ಧಿವಂತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here