ಭರತನಾಟ್ಯ ಪರೀಕ್ಷೆಯಲ್ಲಿ ಶ್ರಿಶಾರದ ಕಲಾ ಕೇಂದ್ರದ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು: ಪುತ್ತೂರು ಶ್ರಿಶಾರದ ಕಲಾ ಕೇಂದ್ರದ ವಿದ್ವಾನ್ ಸುದರ್ಶನ್ ಭಟ್‌ರವರ ಶಿಷ್ಯರಾದ ಅನುಶ್ರೀ(ಎ. ತಿಮ್ಮಪ್ಪ ನಾಯ್ಕ ಹಾಗೂ ಪ್ರೇಮ ದಂಪತಿ ಪುತ್ರಿ), ವೈಷ್ಣವಿ ನಾಯಕ್ (ಸದಾಶಿವ ನಾಯಕ್ ಮತ್ತು ಜಯಶ್ರೀ ದಂಪತಿ ಪುತ್ರಿ), ಜೀವಿತಾ (ಮುಳ್ಯ ಕುಶಾಲಪ್ಪ ಗೌಡ ಮತ್ತು ಅಮಿತ ಕುಶಾಲಪ್ಪ ಗೌಡ ದಂಪತಿ ಪುತ್ರಿ), ಪೂರ್ಣಿಮ (ಪ್ರಕಾಶ್ ಹಾಗೂ ಜಯಂತಿ ದಂಪತಿ ಪುತ್ರಿ) ಹಾಗೂ ಅಕ್ಷತಾಶ್ರೀವತ್ಸ (ಪದ್ಮನಾಭ ಶರ್ಮಾ ಹಾಗೂ ಪ್ರಸನ್ನ ದಂಪತಿ ಪುತ್ರಿ)ರವರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಅತ್ಯಂತ ಉನ್ನತ ಅಂಕಗಳನ್ನು ಪಡೆದು ಪಂಚ ವಿದುಷಿಗಳಾಗಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here