ಅಶೋಕ್ ಕುಮಾರ್ ರೈಗೆ ಕಾಂಗ್ರೆಸ್ ಅಭ್ಯರ್ಥಿತನ ಸಿಗುವಂತೆ ಬನ್ನೂರು ಚರ್ಚ್‌ನಲ್ಲಿ ಪ್ರಾರ್ಥನೆ

0

ಪುತ್ತೂರು: ಮೇ.10ರಂದು ನಡೆಯುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉದ್ಯಮಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ, ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈವರಿಗೆ ಅವಕಾಶ ದೊರೆಯಬೇಕು ಹಾಗೂ ಅಶೋಕ್ ಕುಮಾರ್ ರೈರವರು ಜಯಗಳಿಸಬೇಕು ಎಂದು ಎ.4ರಂದು ಅಶೋಕ್ ರೈ ಅಭಿಮಾನಿಗಳು ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಾಲ್ಟರ್ ಡಿಸೋಜ ಸಿದ್ಯಾಳರವರ ನೇತೃತ್ವದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಅಲೆಕ್ಸ್ ಗೋನ್ಸ್ವಾಲಿಸ್ ಕೃಷ್ಣನಗರ, ಬನ್ನೂರು ಚರ್ಚ್ ಉಪಾದ್ಯಕ್ಷ ಥೋಮಸ್ ಫೆರ್ನಾಂಡೀಸ್, ಸೈಮನ್ ಗೋನ್ಸ್ವಾಲಿಸ್ ಕೃಷ್ಣನಗರ, ಐವನ್ ಡಿಸೋಜ ಕೃಷ್ಣನಗರ, ಜೆರಿ ಪಾಯಿಸ್ ಕೆಮ್ಮಾಯಿ, ಸ್ಟೀವನ್ ಫೆರ್ನಾಂಡೀಸ್ ದಾರಂದಕುಕ್ಕು, ರೊನಾಲ್ಡ್ ಸಿಕ್ವೆರಾ ಬನ್ನೂರುರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here