ಭರತನಾಟ್ಯ ಪರೀಕ್ಷೆಯಲ್ಲಿ ಕುಂಬ್ರ ಬೃಂದಾವನ ನಾಟ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಸುರೇಶ್ ಕೆ. ಹಾಗೂ ಗಾಯತ್ರಿ ದಂಪತಿಯ ಪುತ್ರಿ ಸೌಮ್ಯಾ ಕೆ., ಗಣೇಶ್ ಆಚಾರ್ಯಾ ಮತ್ತು ಚಂದ್ರಕಲಾ ದಂಪತಿ ಪುತ್ರಿ ಭೂಮಿಕಾರವರು ಭರತನಾಟ್ಯ ಸಿನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ರವಿಪ್ರಕಾಶ್ ಮತ್ತು ಸವಿತಾ ದಂಪತಿಯ ಪುತ್ರಿ ಹೃತಿಕ ಕೆ.ಆರ್, ವೆಂಕಟರಮಣ ಮತ್ತು ದೇವಕಿ ದಂಪತಿಯ ಪುತ್ರಿ ಪೂಜಾ, ಕುಶಾಲಪ್ಪ ಮತ್ತು ಸತ್ಯಭಾಮ ದಂಪತಿ ಪುತ್ರಿ ನಿರೀಕ್ಷಾ ಪಿ.ಕೆ., ಸದಾನಂದ ಮತ್ತು ಲತಾ ದಂಪತಿಯ ಪುತ್ರಿ ವೈಷ್ಣವಿರವರು ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಂಬ್ರ ಬೃಂದಾವನ ನಾಟ್ಯಾಲಯದ ನೃತ್ಯಗುರು ವಿದುಷಿ ರಶ್ಮಿ ದಿಲೀಪ್ ರೈರವರ ಶಿಷ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here