ಕೊಡಿಪ್ಪಾಡಿ ದೇವಳದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವರ ಸನ್ನಿಧಿಯಲ್ಲಿ ವರ್ಷಾವಧಿ ಉತ್ಸವದ ಸಂದರ್ಭ ಏ.4 ರಂದು ಧೀಶಕ್ತಿ ಮಹಿಳಾ ಯಕ್ಷಬಳಗ, ಪುತ್ತೂರು ಇವರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಯಕ್ಷಗಾನ ತಾಳಮದ್ದಳೆ ಶ್ರೀರಾಮ ದರ್ಶನ ನಡೆಯಿತು.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಸಿಂಚನಾ, ಮೂಡುಕೋಡಿ, ಮದ್ದಳೆಯಲ್ಲಿ ಅದ್ವೈತ್ ಕೃಷ್ಣ, ಪುತ್ತೂರು, ಮತ್ತು ಚೆಂಡೆಯಲ್ಲಿ ಅದ್ವೈತ್, ಕನ್ಯಾನ ಸಹಕರಿಸಿದರು.

ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಹನುಮಂತನಾಗಿ, ಜಯಲಕ್ಷ್ಮಿ ವಿ ಭಟ್ ವೀರಮಣಿಯಾಗಿ, ಪ್ರೇಮಾ ಕಿಶೋರ್ ಈಶ್ವರನಾಗಿ, ಶುಭಾ ಪಿ ಆಚಾರ್ಯ ಶತ್ರುಘ್ನನಾಗಿ, ಹೀರಾ ಉದಯ್ ಶ್ರೀರಾಮನಾಗಿ ಭಾಗವಹಿಸಿದರು. ದೇವಳದ ವತಿಯಿಂದ ಕಲಾವಿದರನ್ನು ಪ್ರಸಾದವಿತ್ತು ಗೌರವಿಸಲಾಯಿತು.

LEAVE A REPLY

Please enter your comment!
Please enter your name here