ಒಡಿಯೂರಿನಲ್ಲಿ ಹನುಮಜಯಂತಿಗೆ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ’ಹನೂಮವಿಜಯ’ ಮತ್ತು ’ವೀರಮಣಿ ಕಾಳಗ ’ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗು ಸಾದ್ವಿ ಮತಾನಂದಮಯಿ ಅವರ ಉಪಸ್ಥಿತಿಯಲ್ಲಿ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಮುರಳೀಕೃಷ್ಣ ಶಾಸ್ತ್ರೀ ತೆಂಕಬೈಲು , ಉಷಾ ಒಡಿಯೂರು, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಹನುಮಂತ ( ಶುಭಾ ಜೆ.ಸಿ.ಅಡಿಗ ), ಈಶ್ವರ ( ಕಿಶೋರಿ ದುಗ್ಗಪ್ಪ ನಡುಗಲ್ಲು ), ವೀರಮಣಿ ( ಹರಿಣಾಕ್ಷೀ ಜೆ ಶೆಟ್ಟಿ ), ಶತ್ರುಘ್ನ ( ಮನೋರಮಾ ಜಿ ಭಟ್ ), ಶ್ರೀ ರಾಮ ( ಶಾರದಾ ಅರಸ್ ) ಸಹಕರಿಸಿದರು. ಶ್ರೀಗಳು ಕಲಾವಿದರನ್ನು ಗೌರವಿಸಿ ಆಶೀರ್ವಾದಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here