ಬಾರ್ಲ: ಪುನ: ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಉಪ್ಪಿನಂಗಡಿ: ಹಿರೇಬಂಡಾಡಿ ಮತ್ತು ಉಪ್ಪಿನಂಗಡಿ ಕಸಬ ಗ್ರಾಮ ವ್ಯಾಪ್ತಿಯ ಬಾರ್ಲದಲ್ಲಿರುವ ಗ್ರಾಮ ದೈವ ಶಿರಾಡಿ ಹಾಗೂ ಪರಿವಾರ ದೈವಗಳ ಧರ್ಮಚಾವಡಿ ಮತ್ತು ದೈವಸ್ಥಾನದಲ್ಲಿ ಮೇ 6 ಹಾಗೂ 7ರಂದು ನಡೆಯುವ ಶ್ರೀ ಶಿರಾಡಿ, ಶ್ರೀ ರುದ್ರಚಾಮುಂಡಿ, ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ ಹಾಗೂ ಶ್ರೀ ಕಲ್ಲುರ್ಟಿ ದೈವಗಳ ಪುನ: ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಏ.9ರಂದು ಬಿಡುಗಡೆಗೊಳಿಸಲಾಯಿತು.

ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯರವರು ಮಾರ್ಗದರ್ಶನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಕೂಸಪ್ಪ ಗೌಡ ಬಾರ್ಲ, ಸುರೇಶ್ ಬಾರ್ಲ, ತಿಮ್ಮಪ್ಪ ಗೌಡ ಬಾರ್ಲ, ನೀಲಯ್ಯ ಗೌಡ ಬಾರ್ಲ, ಗಂಗಾಧರ ಗೌಡ ಬಾರ್ಲ, ಸಾಂತಪ್ಪ ಗೌಡ ಕೊರಂಬಾಡಿ, ನಾರಾಯಣ ಬಾರ್ಲ, ಲೋಕೇಶ್ ಓನಡ್ಕ, ಚಂದ್ರಶೇಖರ ಕೊರಂಬಾಡಿ, ಶಿವಣ್ಣ ಗೌಡ ಓನಡ್ಕ, ಹೇಮಂತ ಬಾರ್ಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here