ಕುರಿಯ ನಡುಬೈಲು- ರೋಟರಿ ಕುಟುಂಬ ಸಮ್ಮಿಲನ, ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಈಸ್ಟ್ ಇದರ ಆಶ್ರಯದಲ್ಲಿ ಕ್ಲಬಿನ ಸಕ್ರಿಯ ಸದಸ್ಯ, ಬೆಂಗಳೂರಿನ ದಕ್ಷಿಣ ಮಧ್ಯೆ ರೈಲ್ವೇಯ ನಿವೃತ್ತ ಮುಖ್ಯ ಟಿಕೇಟ್ ಪರೀಕ್ಷಕರಾದ ನಡುಬೈಲು ಚಂದ್ರಶೇಖರ ರೈ ರವರ ನಿವಾಸ ಕುರಿಯ ನಡುಬೈಲು ಫಾರ್ಮ್ಸ್‌ನಲ್ಲಿ ರೋಟರಿ ಕ್ಲಬ್ಬಿನ ಕುಟುಂಬ ಸದಸ್ಯರ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಸಾಮಾಜಿಕ ಮುಂದಾಳು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಕೆ. ಸೀತಾರಾಮ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ಮಾತನಾಡಿದ ಸವಣೂರು ಕೆ. ಸೀತಾರಾಮ ರೈಯವರು ರೋಟರಿ ಸದಸ್ಯರ ಕುಟುಂಬ ಸಮ್ಮಿಲನ ಕಾರ‍್ಯಕ್ರಮವನ್ನು ಚಂದ್ರಶೇಖರ್ ರೈಯವರು ಅತ್ಯಂತ ಅರ್ಥಪೂರ್ಣವಾಗಿ ಇಲ್ಲಿ ಮಾಡಿದ್ದಾರೆ. ಇದು ತುಂಬ ಸಂತೋಷ ತಂದಿದೆ ಎಂದರು. ಕಾರ್ಯಕ್ರಮ ಪ್ರಾಯೋಜಕರಾದ ಚಂದ್ರಶೇಖರ ರೈ ನಡುಬೈಲುರವರನ್ನು ಗೌರವಿಸಲಾಯಿತು.

ಅಸಿಸ್ಟೆಂಟ್ ಗವರ್ನರ್ ಜಗಜೀವನ್ ದಾಸ್ ರೈ ಚಿಲ್ಮೆತ್ತಾರು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಉದ್ಯಮಿಗಳಾದ ಪುರಂದರ ರೈ ಮಿತ್ರಂಪಾಡಿ, ಅರಿಯಡ್ಕ ಚಿಕ್ಕಪ್ಪ ನಾೖಕ್‌ ಸಹಿತ ರೋಟರಿ ಸದಸ್ಯರುಗಳು ಉಪಸ್ಥಿತರಿದ್ದರು. ರೋಟರಿ ಈಸ್ಟ್ ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ರೈ ದೇವಸ್ಯರವರು ಸ್ವಾಗತಿಸಿದರು, ಕಾರ್ಯದರ್ಶಿ ಶಶಿಕಿರಣ್ ರೈ ನೂಜಿಬೈಲು ವಂದಿಸಿದರು. ನಿಶಾಂತ್ ರೈ ಪ್ರಾರ್ಥನೆಗೈದರು. ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು ಬಳಿಕ ಭೋಜನ ನಡೆಯಿತು.

LEAVE A REPLY

Please enter your comment!
Please enter your name here