ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಅಂಬೇಡ್ಕರ್‌ ಜಯಂತಿ

0

ಪುತ್ತೂರು: ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನದ ಜಯಂತಿಯನ್ನು ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಆಚರಿಸಲಾಯಿತು.


ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಹಿತ್‌ರವರ ನೇತೃತ್ವದಲ್ಲಿ ಸಂಘ ಕಚೇರಿಯಲ್ಲಿ ನಡೆಯಿತು. ಆದಿ ದ್ರಾವಿಡ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ್ ನೆಲ್ಲಿಗುಂಡಿ, ಗೌರವ ಸಲಹೆಗಾರ ಸೋಮನಾಥ್ ಉಪಿನಂಗಡಿ, ಗೌರವಧ್ಯಕ್ಷ ಸುಂದರ ಸಿದ್ಯಾಲ, ತಾಲೂಕು ಕಾರ್ಯದರ್ಶಿ ಅಣ್ಣು ತಿಂಗಳಾಡಿ, ಶಶಿ ಕೆರೆಮೂಲೆ, ಪದ್ಮನಾಭ ಚಿಕ್ಕಮುಡ್ನೂರು ಮತ್ತು ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here