ಮಹಾದೇವನ ಸನ್ನಿಧಿಯಲ್ಲಿ ಗೌರವ ಸ್ವೀಕರಿಸಿ ವಿಶೇಷ ಪೂಜೆ ಸಲ್ಲಿಸಿದ ಬೆಳ್ಳಿಪ್ಪಾಡಿ ಕುಟುಂಬ

0

ಪುತ್ತೂರು: ಎ.17ರಂದು ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿದ ಬೆಳ್ಳಿಪ್ಪಾಡಿ ಮನೆತನದ ರಮಾನಾಥ ರೈ ಕುಟುಂಬಸ್ಥರು ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಗೌರವ ಸ್ವೀಕರಿಸಿ, ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ತುಳುನಾಡಿನ ಗುತ್ತು ಮನೆತನಗಳ ಪೈಕಿ ಬೆಳ್ಳಿಪ್ಪಾಡಿ ಪ್ರಮುಖ ಮನೆತನವಾಗಿದ್ದು, ಹಿಂದಿನ ಕಾಲದಿಂದಲೂ ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ನೂರಾರು ಕುಟುಂಬಗಳಿಗೆ ಆಶ್ರಯ ನೀಡಿದ ಈ ಮನೆತನವಾಗಿದೆ.ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ಳಿಪ್ಪಾಡಿ ಮನೆತನಕ್ಕೆ ಅನಾದಿಕಾಲದಿಂದಲೂ ವಿಶೇಷ ಗೌರವ ನೀಡುವುದು ಸಂಪ್ರದಾಯವಾಗಿ ನಡೆದು ಬಂದಿದೆ. ಮಹಾಲಿಂಗೇಶ್ವರನ ಸನ್ನಿಧಿಗೆ ಬಂದ ಬೆಳ್ಳಿಪ್ಪಾಡಿ ಕುಟುಂಬಸ್ಥರನ್ನು ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸ್ವಾಗತಿಸಿದರು.

LEAVE A REPLY

Please enter your comment!
Please enter your name here