ಹನುಮಗಿರಿಗೆ ಬಂದಿಳಿದ ಸಂಸದ ತೇಜಸ್ವಿ ಸೂರ್ಯ ಮತ್ತು ಶೃತಿ

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಪಾದಯಾತ್ರಾ ಮೆರವಣಿಗೆ ನಡೆಯಲಿದ್ದು, ಸಹಸ್ರಾರು ಕಾರ್ಯಕರ್ತರೊಂದಿಗೆ ಸಂಸದ , ಬಿಜೆಪಿ ಯುವ ಮೂರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಮತ್ತು ಚಲನ ಚಿತ್ರ ನಟಿ ಶೃತಿ ಭಾಗವಹಿಸಲಿದ್ದಾರೆ. ಸಂಸದ ತೇಜಸ್ವೀ ಸೂರ್ಯ ಮತ್ತು ಶೃತಿ ಈಗಾಗಲೇ ಪುತ್ತೂರು ಹೊರವಲಯದ ಹನುಮಗಿರಿಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ್ದು ಪುತ್ತೂರಿಗೆ ಪ್ರಯಾನ ಬೆಳೆಸಿದ್ದಾರೆ. ಈ ವೇಳೆ ಹನುಮಗಿರಿ ಕ್ಷೇತ್ರದ ದರ್ಮದರ್ಶಿ ಶಿವರಾಮ್‌ ಪಿ , ನಾಗರಾಜ್‌ ನಡುವಡ್ಕ, ಆರ್‌ ಸಿ ನಾರಾಯಣ , ಸೀತಾರಾಮ ರೈ, ಸಹಜ್‌ ರೈ, ಸಚಿನ್‌ , ನವೀನ್‌ ಬನ್ನೂರು, ರಾಜೇಶ್‌ ಕಾವೇರಿ, ಗೌರಿ ಬನ್ನೂರು, ಯಶಸ್ವಿನಿ ಶಾಸ್ತ್ರಿ, ಉಷಾ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here