ಉಪ್ಪಿನಂಗಡಿ : ಸ್ವಾಮೀಜಿಯವರ ಸಮ್ಮುಖದಲ್ಲಿ ಭಜನಾ ಸೇವೆ

0

ಉಪ್ಪಿನಂಗಡಿ: ಪ್ರಸಕ್ತ ಬೆಳ್ತಂಗಡಿಯಲ್ಲಿ ಮೊಕ್ಕಾಂ ಹೂಡಿರುವ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಭಜನಾ ಸೇವೆಯನ್ನು ನಡೆಸಿಕೊಟ್ಟ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಾಲ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿಯ ಸದಸ್ಯರು ಸ್ವಾಮೀಜಿಯವರಿಂದ ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಕೆ. ಗಣೇಶ್ ನಾಯಕ್, ಉಪೇಂದ್ರ ಪೈ, ರಮೇಶ್ ನಾಯಕ್, ಶ್ರೀನಿವಾಸ ಭಟ್ , ರಾಮಕೃಷ್ಣ ಪ್ರಭು, ಪೂಜಾ ರಾಘವೇಂದ್ರ ಪ್ರಭು, ಹರೀಶ್ ಕಿಣಿ, ಜಯಲಕ್ಷ್ಮಿ ನಾಯಕ್, ಗಿರೀಶ್ ನಾಯಕ್, ಪ್ರಪುಲ್ಲಾ ಆರ್ ನಾಯಕ್, ರಂಜಿತಾ ಪೈ, ಸಂಜನಾ ಕಾಮತ್, ಅನುಷಾ ಶೆಣೈ, ಸ್ವಪ್ನಾ ದೇವಿದಾಸ್ ಭಟ್, ದೀಪ್ತಿ ಪ್ರದೀಪ್ ನಾಯಕ್, ಮಾಯಾ ಸಂದೀಪ್ ಭಟ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here