ಗಾಯಾಳುವಿಗೆ ಹೊಸಬಟ್ಟೆ -ಡಾ. ಅಜೇಯ್‌ ಮಾನವೀಯ ಸೇವೆ

0

ಪುತ್ತೂರು : ನೆಟ್ಟಣದಲ್ಲಿ ಕಾರು ಮತ್ತು ತೂಫಾನ್‌ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮತ್ತು ಆಕೆಯ ಮಗುವಿಗೆ ಡಾ. ಅಜೇಯ್‌ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತದಲ್ಲಿ ,ಮಹಿಳೆಯ ಪತಿ ಮೃತಪಟ್ಟು ತಾಯಿ ಮಗು ರಕ್ತದ ಮಡುವಿನಲ್ಲಿದ್ದಾರೆ. ಬದಲಿ ಬಟ್ಟೆಯೂ ಇರದ ಕಾರಣ ಡಾ. ಅಜೇಯ್‌ ಹೊಸಬಟ್ಟೆ ಕೊಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ. ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್‌ ಮತ್ತು ಅಶೋಕ್‌ ಭಂಡಾರಿ ತಾಯಿ ಮಗುವನ್ನು ಬೇಲೂರಿನ ತಗರೆಯಲ್ಲಿರುವ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಡಾ. ಅಜೇಯ್‌, ರಫೀಕ್‌ ಮತ್ತು ಅಶೋಕ್‌ ಭಂಡಾರಿ ಅವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here