ಎ.22-ಎ.24 : ಪಾಲ್ತಾಡಿ ಚಾಕೋಟೆತ್ತಡಿ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ

0

ಎ.23ರಂದು ಶಿವಧೂತ ಗುಳಿಗೆ ವಿಭಿನ್ನ ಶೈಲಿಯ ನಾಟಕ ಪ್ರದರ್ಶನ,ಎ.24ರಂದು ದೈವಗಳ ನೇಮೋತ್ಸವ

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.

ಎ.22ರಂದು ಪೂರ್ವಾಹ್ನ ಮುಂಡ್ಯೆ ಅವರೋಹಣ ,ಎ.23ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ ಭಂಡಾರ ತೆಗೆಯುವುದು,ಹೋಮ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 8.30ಕ್ಕೆ ಉಳ್ಳಾಕುಲು ಫ್ರೆಂಡ್ಸ್‌ ಕ್ಲಬ್‌ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಸಭಾ ಕರ್ಯಕ್ರಮ ನಡೆಯಲಿದೆ.ಸಭೆಯಲ್ಲಿ ಖ್ಯಾತ ನಾಟಕ ನಿರ್ದೇಶಕ ವಿಜಯಕುಮಾರ್‌ ಕೋಡಿಯಾಲ್ ಬೈಲು,ಕಾಂತಾರ ಚಲನ ಚಿತ್ರ ನಟ ಸ್ವರಾಜ್ ಶೆಟ್ಟಿ ,ಅನ್ನದಾನದ ಸೇವಾಕರ್ತರಾದ ಕುಶಾಲಪ್ಪ ಗೌಡ ಪಲ್ಲತ್ತಡ್ಕ,ಶಾಶ್ವತ ಚಪ್ಪರದ ಸೇವಾಕರ್ತರಾದ ನಾರಾಯಣ ರೈ ಕಲಾಯಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.ರಾತ್ರಿ 9 ಗಂಟೆಗೆ ವಿಜಯಕುಮಾರ್‌ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.

ಎ.24ರಂದು ರಾತ್ರಿ 6.30ಕ್ಕೆ ಉಳ್ಳಾಕುಲು ದೈವದ ನೇಮ ನಡೆದು ಸಿರಿಮುಡಿ ಗಂಧಪ್ರಸಾದ,ನಂತರ ಕೊಳ್ಳಿ ಕುಮಾರ ದೈವದ ನೇಮ,ಮಹಿಷಂತಾಯ ದೈವದ ನೇಮ,ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನಡೆಯಲಿದೆ.ಮಧ್ಯಾಹ್ನಅನ್ನಸಂತರ್ಪಣೆ,ಪುರುಷದೈವದ ನೇಮೋತ್ಸವ ,ಪಂಜುರ್ಲಿ ದೈವದ ನೇಮೋತ್ಸವ ,ಸಂಜೆ ವ್ಯಾಘ್ರ ಚಾಮುಂಡಿದೈವದ ಒಲಸರಿ ನೇಮೋತ್ಸವ ನಡೆದು ರಾತ್ರಿ ಮುಂಡ್ಯೆ ಅವರೋಹಣ ನಡೆಯಲಿದೆ ಎಂದು ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ರೈ ನಳೀಲು,ಅಧ್ಯಕ್ಷ ಸಂಜೀವಗೌಡ ಹಾಗೂ ಸಮಿತಿಯ ಪದಾಧಿಕಾರಿಗಳು ,ದೈವಸ್ಥಾನಕ್ಕೆ ಸಂಬಂಧಪಟ್ಟ ಆರುಮನೆಯ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here