ಕೊಡಿಮಾರು ಅಬೀರ ಗ್ರಾಮ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ- ದೈವಗಳ ನೇಮೋತ್ಸವ

0

ಕಾಣಿಯೂರು: ಬೆಳಂದೂರು ಗ್ರಾಮದ ಕೊಡಿಮಾರು ಅಬೀರದಲ್ಲಿ ಶ್ರೀ ಉಳ್ಳಾಕುಲು, ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವವು ಏ 20 ಮತ್ತು ಏ 21ರಂದು ನಡೆಯಿತು.

ಎ.15 ರಂದು ಬೆಳಿಗ್ಗೆ ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಗೊನೆ ಕಡಿಯುವ ಮೂಲಕ ನೇಮೊತ್ಸವಕ್ಕೆ ಚಾಲನೆ ನೀಡಿದರು. ಏ 20ರಂದು ಬೆಳಿಗ್ಗೆ ಗಂಟೆ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿದು,ಏ 21ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ, ಬೈಸುನಾಯಕ, ಬೇಡ ದೈವಗಳ ನೇಮೋತ್ಸವ, ವ್ಯಾಘ್ರಚಾಮುಂಡಿ, ಗುಳಿಗ, ಪರಿವಾರ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ನಡೆಯಿತು. ಬಳಿಕ ಕೋಜಿಲೆ ಬಿಡಲಾಯಿತು.

LEAVE A REPLY

Please enter your comment!
Please enter your name here