ಒಳತ್ತಡ್ಕ: ಜಾಗದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ – ದೂರು

0

ಪುತ್ತೂರು:ಜಾಗದ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ಕೃಷ್ಣಪ್ಪ(32ವ) ಮತ್ತು ಚೋಮು ಎಂಬವರು ದೂರುದಾರರಾಗಿದ್ದು, ‘ನಮಗೆ ಸೇರಿದ ಜಮೀನಿಗೆ ಮಹಾಬಲ ರೈ ಎಂಬವರು ಬೇಲಿ ಹಾಕಿ ವಶಪಡಿಸಿಕೊಂಡಿದ್ದು, ಈ ಕುರಿತು ಸರ್ವೆ ಇಲಾಖೆಗೆ ದೂರು ನೀಡಿದ್ದೆವು. ಎ.20ರಂದು ಸರ್ವೆ ಇಲಾಖೆಯವರು ಬಂದು ಸರ್ವೆ ಮಾಡುತ್ತಿದ್ದಾಗ ಗಡಿ ಕಲ್ಲು ಸಿಗಲಿಲ್ಲ. ಈ ಸಂದರ್ಭ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದರು. ಈ ವೇಳೆ ನನ್ನ ಜೊತೆ ಇದ್ದ ಅಣ್ಣ ವಿಜಯ ನನಗೆ ಹಲ್ಲೆ ಮಾಡದಂತೆ ತಡೆದಿದ್ದ. ನನ್ನ ಅಕ್ಕನ ಮಗನಾದ ದಾಮೋದರ, ತಮ್ಮ ಸುಧಾಕರ ಎಂಬವರು ಜಗಳ ಬಿಡಿಸಲು ಮುಂದಾದರು.ಆಗ ಸನತ್ ರೈ ಎಂಬವರು ಜಾತಿ ನಿಂದನೆ ಮಾಡಿ ಕಾಲನಿಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here