ಬಲ್ನಾಡು:ಸಂಬಂಧಿಕರ ಮನೆಯಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

0

ಪುತ್ತೂರು:ಸಂಬಂಧಿಕರ ಮನೆಯಲ್ಲೇ ವಾಸ್ತವ್ಯ ಹೊಂದಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.22ರಂದು ಬಲ್ನಾಡು ಗ್ರಾಮದ ಕೂಟೇಲು ಎಂಬಲ್ಲಿ ನಡೆದಿದೆ.

ಬಲ್ನಾಡು ಗ್ರಾಮದ ಜಗನ್ನಾಥ ಆಚಾರ್ಯ ಎಂಬವರ ಪತ್ನಿ ಸರಸ್ವತಿ ಅವರ ಅಕ್ಕನ ಮಗಳಾದ ಪುಷ್ಪಲತಾ ಅವರ ಗಂಡ ಯಶೋಧರ ಅವರ ಅತ್ತೆ ಜಲಜಾ ಆಚಾರ್‌ರವರು ಮೃತಪಟ್ಟವರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಏ.22ರಂದು ಅವರು ಮನೆಯ ಪಕ್ಕದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here