ಕಾಯಿಮಣ : ಬಿಜೆಪಿ ಕಾರ್ಯಕರ್ತರ ಸಭೆ, ಮತಯಾಚನೆ

0

ಕಾಣಿಯೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಮಾತಯಾಚನೆ ಮತ್ತು ಕಾರ್ಯಕರ್ತರ ಸಭೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಯಿಮಣ ಗ್ರಾಮದ ನಾರಾಯಣ ಗೌಡ ಅಗಳಿ ಹೊಸಮನೆ ಅವರ ಮನೆಯಲ್ಲಿ ಎ.23ರಂದು ನಡೆಯಿತು.

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟ್ ವಲಳಂಬೆ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕುಶಾಲಪ್ಪ ಪೂವಾಜೆ, ಅಭ್ಯರ್ಥಿ ಪ್ರಮುಖ್ ವಿನಯ ಮುಳುಗಾಡು, ಮಂಡಲ ಕಾರ್ಯದರ್ಶಿ ಇಂದಿರಾ ಬಿ. ಕೆ, ಮಂಡಲ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಆಳ್ವ, ಪರಿವಾರ ಸಂಘಟನೆಯ ಪ್ರಮುಖ್ ಸುಪ್ರಿತ್ ರೈ ಖಂಡಿಗ, ಜಿ. ಪಂ. ಮಾಜಿ ಸದಸ್ಯರಾದ ಪ್ರಮೀಳಾ ಜನಾರ್ದನ, ಪುಷ್ಪಾವತಿ ಕಳುವಾಜೆ, ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮ ಶೆಟ್ಟಿ, ಕಾಯಿಮಣ ಬೂತ್ ಸಮಿತಿ ಅಧ್ಯಕ್ಷ ಸುಧಾಕರ್ ಮರಕ್ಕಡ, ಕಾರ್ಯದರ್ಶಿ ಪವನ್ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು. ಮಂಡಲ ಸಮಿತಿ ಸದಸ್ಯೆ ಉಮೇಶ್ವರಿ ಅಗಳಿ ಸ್ವಾಗತಿಸಿ, ಬೆಳಂದೂರು ಶಕ್ತಿ ಕೇಂದ್ರ ಪ್ರಮುಖ್ ಮೋಹನ್ ಅಗಳಿ ವಂದಿಸಿದರು.

LEAVE A REPLY

Please enter your comment!
Please enter your name here