ಕಬಕ: ವಿಷ ಸೇವಿಸಿ ಯುವಕ ಮೃತ್ಯು

0

ಪುತ್ತೂರು:ವಿಷ ಪದಾರ್ಥ ಸೇವಿಸಿ ಗುಡ್ಡದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಕಬಕ ಆಲದಗುಂಡಿಯ ಯುವಕ ಮನೋರಾಜ್(25ವ.)ಮೃತಪಟ್ಟ ಘಟನೆ ಏ.24ರಂದು ನಡೆದಿದೆ. ಕಬಕ ಗ್ರಾಮದ ಆಲದಗುಂಡಿ ದಿ.ಚೆನ್ನಪ್ಪ ಗೌಡ ಎಂಬವರ ಪುತ್ರ ಮನೋರಾಜ್ ಅವರು ಕಳೆದ 4 ವರ್ಷಗಳಿಂದ ಮಂಗಳೂರಿನ ಭಾರತ್ ಆಗ್ರೋ ಪೆಟ್ ಆಂಡ್ ಇಂಡಸ್ಟ್ರೀಸ್‌ನಲ್ಲಿ ಕೋಳಿ ವ್ಯವಹಾರದ ಹಣ ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದು ಕಳೆದ ಒಂದು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ಈ ನಡುವೆ ಏ.22ರಂದು ಮನೋರಾಜ್ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಇಬ್ಬರು ಮನೆಗೆ ಬಂದು ಸಂಸ್ಥೆಗೆ ಕೊಡಲು ಬಾಕಿ ಇರುವ ಹಣದ ವಿಚಾರ ಮಾತನಾಡಿದ್ದಾರೆ. ಏ.24ರಂದು ಮನೋರಾಜ್ ಅವರ ತಾಯಿ ಬೀಡಿ ಬ್ರಾಂಚ್‌ಗೆ ಹೋಗಿ ಬರುವಾಗ ಮನೋರಾಜ್ ಅವರು ಮನೆಯಿಂದ ನಾಪತ್ತೆಯಾಗಿದ್ದರು. ಅವರು ಆಲದಗುಂಡಿ ಗುಡ್ಡದಲ್ಲಿ ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡಿರುವುದು ಬಳಿಕ ಬೆಳಕಿಗೆ ಬಂದಿದ್ದು ಅಲ್ಲಿಂದ ಕಾರ್ತಿಕ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಗಲೇ ಮನೋರಾಜ್ ಅವರು ಮೃತಪಟ್ಟಿದ್ದರು. ಮೃತರು ತಾಯಿ ಲೀಲಾವತಿ ಅವರನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here