ಅರಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಎಂಡೋಲಿಯಂ ಹಂಡೆ ಕೊಡುಗೆ

0

ಅರಿಯಡ್ಕ :ಶ್ರೀ ಕೃಷ್ಣ ಭಜನಾ ಮಂದಿರ ರಿ, ಕೌಡಿಚ್ಚಾರು ಅರಿಯಡ್ಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅರಿಯಡ್ಕ ಒಕ್ಕೂಟ ಎ ಮತ್ತು ಬಿ ಇದರ ವತಿಯಿಂದ ರೂ 20,000 ವೆಚ್ಚದ ಎಂಡೋಲಿಯಂ ಹಂಡೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಒಕ್ಕೂಟಗಳ ಅಧ್ಯಕ್ಷರುಗಳಾದ ತಿಲಕ್ ರೈ ಕುತ್ಯಾಡಿ ಮತ್ತು ದಯಾನಂದ ಗೌಡ ಆಕಾಯಿ ಒಕ್ಕೂಟದ ಮಾಜಿ ಅಧ್ಯಕ್ಷ ಕುಂಞಿ ರಾಮ ಮಣಿಯಾಣಿ ಕುತ್ಯಾಡಿ, ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕುತ್ಯಾಡಿ, ಭಜನಾ ಮಂದಿರದ ಜತೆ ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ, ಸದಸ್ಯರಾದ ಪ್ರತೀಕ್ ಆಕಾಯಿ, ಮೋನಪ್ಪ ಕುಲಾಲ್ ಕೌಡಿಚ್ಚಾರು, ಕರುಣಾಕರ ಗೌಡ ಆಚಾರಿ ಮೂಲೆ ಮತ್ತು ಆನಂದ ನಾಯ್ಕ ಪಾದೆಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here