ಪಾಲ್ತಾಡಿ ಚಾಕೋಟೆತ್ತಡಿ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ-ಶಿವಧೂತ ಗುಳಿಗೆ ವಿಭಿನ್ನಶೈಲಿಯ ನಾಟಕ ಪ್ರದರ್ಶನ, ದೈವಗಳ ನೇಮೋತ್ಸವ

0

ಚಿತ್ರ : ಶೃಂಗಾರ್ ಬೆಳ್ಳಾರೆ

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಿತು.

ಚಿತ್ರ : ಶೃಂಗಾರ್ ಬೆಳ್ಳಾರೆ

ಎ.22ರಂದು ಪೂರ್ವಾಹ್ನ ಮುಂಡ್ಯೆ ಅವರೋಹಣ ,ಎ.22ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ ಭಂಡಾರ ತೆಗೆಯುವುದು,ಹೋಮ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಗೌರವಾರ್ಪಣೆ
ರಾತ್ರಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಿತು.ಸಭೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರು ಮಾತನಾಡಿ ಶುಭಹಾರೈಸಿದರು.

ಖ್ಯಾತ ನಾಟಕ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲು,ಕಾಂತಾರ ಚಲನ ಚಿತ್ರ ನಟ ಸ್ವರಾಜ್ ಶೆಟ್ಟಿ ,ಅನ್ನದಾನದ ಸೇವಾಕರ್ತರಾದ ಕುಶಾಲಪ್ಪ ಗೌಡ ಪಲ್ಲತ್ತಡ್ಕ,ಶಾಶ್ವತ ಚಪ್ಪರದ ಸೇವಾಕರ್ತರಾದ ನಾರಾಯಣ ರೈ ಕಲಾಯಿ ಅವರಿಗೆ ಗೌರವಾರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ ಸಂಜೀವ ಗೌಡ,ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗುರುಕಿರಣ್ ಬೊಳಿಯಾಲ,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಪಾಲ್ತಾಡಿ ಮೊದಲಾದವರಿದ್ದರು.

ಶಿವಧೂತೆ ಗುಳಿಗೆ ನಾಟಕ
ಬಳಿಕ ವಿಜಯ ಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಿತು.ಸುಮಾರು ೨೦೦೦ ಕ್ಕೂ ಅಧಿಕ ಮಂದಿ ನಾಟಕ ವೀಕ್ಷಿಸಿದರು.

ನೇಮೋತ್ಸವ
ಎ.24ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮ ನಡೆದು ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಿತು. ನಂತರ ಕೊಳ್ಳಿ ಕುಮಾರ ದೈವದ ನೇಮ,ಮಹಿಷಂತಾಯ ದೈವದ ನೇಮ,ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನೆರವೇರಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದ ಬಳಿಕ ಪುರುಷ ದೈವದ ನೇಮೋತ್ಸವ ,ಪಂಜುರ್ಲಿ ದೈವದ ನೇಮೋತ್ಸವ ,ಸಂಜೆ ವ್ಯಾಘ್ರ ಚಾಮುಂಡಿ ದೈವದ ಒಲಸರಿ ನೇಮೋತ್ಸವ ನಡೆಯಿತು.ರಾತ್ರಿ ಮುಂಡ್ಯೆ ಅವರೋಹಣ ನಡೆಯಿತು.

ಈ ಸಂಧರ್ಭದಲ್ಲಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ ಸಂಜೀವ ಗೌಡ ,ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು,ಮೋನಪ್ಪ ಗೌಡ ಪಾರ್ಲ,ವಿಠಲ ಶೆಟ್ಟಿ ಪಾಲ್ತಾಡಿ,ಸೀತಾರಾಮ ರೈ ಕಲಾಯಿ,ಪ್ರವೀಣ್ ರೈ ನಡುಕೂಟೇಲು,ಕಾರ್ಯದರ್ಶಿ ವಿನಯಚಂದ್ರ ಕೆಳಗಿನಮನೆ,ಜತೆ ಕಾರ್ಯದರ್ಶಿಗಳಾದ ವಿದ್ಯಾಧರ ಗೌಡ ಪಾರ್ಲ,ಕರುಣಾಕರ ಸಾಲ್ಯಾನ್ ಕಲ್ಲಕಟ್ಟ,ಖಜಾಂಜಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂದಪಟ್ಟ ಆರುಮನೆಯ ಪ್ರಮುಖರಾದ ಪಾಲ್ತಾಡಿ ಗುತ್ತಿನಮನೆಯ ನರಸಿಂಹ ಪಕ್ಕಳ, ವಿನೋದ್ ರೈ ಪಾಲ್ತಾಡು,ಜನಾರ್ಧನ ಗೌಡ ಕೆಳಗಿನಮನೆ,ತಿಮ್ಮಪ್ಪ ಗೌಡ ದೊಡ್ಡಮನೆ,ಅಶೋಕ್ ಗೌಡ ಖಂಡಿಗೆ,ರಾಮಕೃಷ್ಣ ಗೌಡ ಅಂಗಡಿಹಿತ್ಲು,ಮುಂಡಪ್ಪ ಪೂಜಾರಿ ಬೊಳಿಯಾಲ ಹಾಗೂ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here