ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌- ಬಡ ರೋಗಿಗಳಿಗೆ, ಅಶಕ್ತ ಕುಟುಂಬಗಳಿಗೆ ಕಿಟ್, ಚೆಕ್ ವಿತರಣೆ

0

ಪುತ್ತೂರು: ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ವತಿಯಿಂದ 12ನೇ ಕಾರ್ಯಕ್ರಮವಾಗಿ ಬಡ ರೋಗಿಗಳಿಗೆ, ಅಶಕ್ತರಿಗೆ, ಕ್ಯಾನ್ಸರ್ ಪೀಡಿತ, ಹಾಗೂ ಆಯ್ದ ಕುಟುಂಬಗಳಿಗೆ, ದಾನಿಗಳ ಸಹಕಾರದಿಂದ “ದಿನಸಿ ಸಾಮಗ್ರಿಗಳ ಕಿಟ್”ವಿತರಣೆ ಹಾಗೂ” ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಚೆಕ್ ವಿತರಣೆ ಕಾರ್ಯಕ್ರಮ ಏ.23ರಂದು ಲಯನ್ಸ್ ಕ್ಲಬ್ ಹಾಲ್‌ನಲ್ಲಿ ನಡೆಯಿತು.

ಸರ್ವೆ ಪೋಸ್ಟ್ ಆಫೀಸ್ ಪೋಸ್ಟ್ ಮಾಸ್ಟರ್ ಹರ್ಷ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುಮಂಗಲ ಶೆಣೈ, ಅತಿಥಿಯಾಗಿ ಭಾಗವಹಿಸಿದರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ಅಧ್ಯಕ್ಷೆ ಸುಮಿತ್ರ ಎಸ್. ಚೆಕ್ ವಿತರಣೆ ಮಾಡಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಧನ ಸಹಾಯ ನೀಡಿದ ದಾನಿಗಳಿಗೆ ಕೃತಜ್ಞತೆ ತಿಳಿಸಿದರು. ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ಖಜಾಂಚಿ ಕಾವ್ಯ, ಸಂಚಾಲಕ ಅವಿನಾಶ್, ಸದಸ್ಯರಾದ ಚೈತ್ರ, ಅಮಿತಾ, ಪ್ರಮೀಳಾ, ಗೌರವ ಸಲಹೆಗಾರರಾದ ಶಿವಶಂಕರ್ ಶರ್ಮ ಉಪಸ್ಥಿತರಿದ್ದರು. ಶಾಂತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here