ನಿಮ್ಮ ಜೈಕಾರಕ್ಕೆ ತಾಲೂಕು ಕಚೇರಿಯ ಫೈಲುಗಳು ಅಲುಗಾಡಬೇಕು: ಅಶೋಕ್ ರೈ

0

ಪುತ್ತೂರು: ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಬಾಕಿಯಾದ ಅಕ್ರಮ ಸಕ್ರಮ ಫೈಲುಗಳು, 94 ಸಿ, 94 ಸಿಸಿ ಫೈಲುಗಳು ಸೇರಿದಂತೆ ಲಂಚ ಕೊಡದ ಕಾರಣಕ್ಕೆ ಪೆಂಡಿಂಗ್ ಇಟ್ಟಿರುವ ಫೈಲುಗಳು ಇನ್ನು ಕೆಲವೇ ದಿನಗಳಲ್ಲಿ ಮೈ ಕೊಡವಿ ಎದ್ದೇಳಲಿದ್ದು ಇದಕ್ಕೆ ಕಾರ್ಯಕರ್ತರ ಜೈಕಾರ ಅತೀ ಮುಖ್ಯ. ನಿಮ್ಮ ಜೈಕಾರ ಗ್ರಾಮದ ಮನೆ ಮನೆಗಳಿಗೂ ತಲುಪಬೇಕು. ಈ ಕಾರಣಕ್ಕೆ ತಾಲೂಕು ಕಚೇರಿಯ ಫೈಲುಗಳ ಅಲುಗಡಬೇಕು ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಬಡಗನ್ನೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ರವರ ಮನೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಡವರು ನಯಾ ಪೈಸೆ ಕೊಡದೆ ತಾಲೂಕು ಕಚೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುವ ಕಾಲ ಬರಲಿದೆ. ಯಾರ ಕೈಯ್ಯನ್ನೂ ಬಿಸಿ ಮಾಡದೆ ನಿಮ್ಮ ಕೆಲಸಗಳು ನಡೆಯಲಿದೆ. ಯಾರದೇ ಫೈಲುಗಳಾಗಿರಲಿ, ಕಾಂಗ್ರೆಸ್ ಕಾರ್ಯಕರ್ತನೇ ಆಗಲಿ, ಬಿಜೆಪಿ ಕಾರ್ಯಕರ್ತನೇ ಆಗಲಿ, ಜಾತಿ, ಧರ್ಮ, ಪಕ್ಷ ನೋಡದೇ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ. ನೀವು ಆಶೀರ್ವಾದ ಮಾಡಿದ್ದಲ್ಲಿ ನಾನು ಈಗ ಮಾಡುತ್ತಿರುವ ಟ್ರಸ್ಟ್‌ನ ಸಮಾಜ ಸೇವೆಯನ್ನು ಇನ್ನಷ್ಟು ವಿಸ್ತಾರ ಮಾಡಲಿದ್ದು ಇದಕ್ಕೆ ನನ್ನ ಸ್ವಂತ ಉದ್ದಿಮೆಯ ಹಣವನ್ನು ಬಳಸುತ್ತೇನೆ. ಸರಕಾರದ ಅನುದಾನ ಅದು ಪೂರ್ತಿಯಾಗಿ ಜನರಿಗೆ ತಲುಪುವಂತೆ ಮಾಡುತ್ತೇನೆ ಎಂದು ರೈಗಳು ಹೇಳಿದರು. ಈ ವೇಳೆ ಕಾರ್ಯಕರ್ತರ ಜೈಕಾರ, ಘೋಷಣೆ ಮುಗಿಲುಮುಟ್ಟಿತ್ತು.

LEAVE A REPLY

Please enter your comment!
Please enter your name here