ಆಮ್ ಆದ್ಮಿ ಪಾರ್ಟಿಯಿಂದ ತಿಂಗಳಾಡಿಯಲ್ಲಿ ಚುನಾವಣಾ  ಪ್ರಚಾರ ಸಭೆ

0

ದೆಹಲಿ ಮಾದರಿ ಆಡಳಿತಕ್ಕೆ ಆಮ್ ಆದ್ಮಿ ಬೆಂಬಲಿಸಿ-ಪುರುಷೋತ್ತಮ ಗೌಡ 
ಪುತ್ತೂರು: ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಚುನಾವಣೆ ಪ್ರಚಾರ ಸಭೆ ತಿಂಗಳಾಡಿ ಜಂಕ್ಷನ್ ನಲ್ಲಿ ನಡೆಯಿತು. ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ನಮ್ಮ ಆಮ್ ಆದ್ಮಿ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿಯೂ  ದೆಹಲಿ ಮಾದರಿಯಲ್ಲಿ ಅಧಿಕಾರ ನೀಡಲಿದೆ ಎಂದು ಹೇಳಿದರು.

ದೆಹಲಿ ಸರ್ಕಾರದ ಉಚಿತ ಯೋಜನೆಗಳು ಬೋಗಸ್ ಅಲ್ಲ, ಜನರ ತೆರಿಗೆಯನ್ನು ಬಡವರಿಗೆ ನೀಡುತ್ತಿದೆ ಆದರೂ ದೆಹಲಿ ಸರ್ಕಾರ ಲಾಭದಲ್ಲಿ ಇದೆ ಎಂದು ಅವರು  ಹೇಳಿದರು.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಾ.ಬಿ.ಕೆ ವಿಶುಕುಮಾರ್ ಗೌಡ ಮಾತನಾಡಿ ಪುತ್ತೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ರಾಜಕೀಯದ ಅನುಭವ ಇಲ್ಲದಿದ್ದರೂ ಸ್ಪರ್ಧೆ ಮಾಡುತ್ತಿದ್ದೇನೆ ಹಣ ಮಾಡುವ ಉದ್ದೇಶದಿಂದ ಅಲ್ಲ ಎಂದು ಹೇಳಿದರು

LEAVE A REPLY

Please enter your comment!
Please enter your name here