ಅಶೋಕ್‌ ರೈಯಿಂದ ತೆಂಕಿಲ ಕೊರಗಜ್ಜನಲ್ಲಿ ಅಭಯ ಯಾಚನೆ-ಚಂದಳಿಕೆಯಲ್ಲಿ ಮತಯಾಚನೆ

0

ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಶೋಕ್‌ ಕುಮಾರ್‌ ರೈ ಇಂದು ತೆಂಕಿಲದಲ್ಲಿರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಅಭಯ ಯಾಚಿಸಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಲಿ ಸೇರಿದಂತೆ ಪಕ್ಷದ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಬಳಿಕ ವಿಟ್ಲ ಚಂದಳಿಕೆಯಲ್ಲಿರುವ ಗೇರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡದ ಅಶೋಕ್‌ ರೈ ಕಾಂಗ್ರೆಸ್‌ ನ ಗ್ಯಾರೆಂಟಿ ಕೊಡುಗೆಗಳ ಬಗ್ಗೆ ವಿವರಿಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ನ ಪದಾಧಿಕಾರಿಗಳು, ಘಟಕದ ನೂರಾರು ಕಾರ್ಮಿಕರು, ಅಭಿಮಾನಿಗಳು, ಕಾರ್ಯ ಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here