ಆಮ್ ಆದ್ಮಿ ಪಾರ್ಟಿಯಿಂದ ಪೆರ್ಲಂಪಾಡಿಯಲ್ಲಿ ಪ್ರಚಾರ ಸಭೆ

0

ಪುತ್ತೂರು: ಆಮ್ ಆದ್ಮಿ ಪಾರ್ಟಿ ವತಿಯಿಂದ ಪೆರ್ಲಂಪಾಡಿಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಬಿ.ಕೆ.ವಿಶುಕುಮಾರ್ ಗೌಡ ಪರವಾಗಿ ಚುನಾವಣಾ ಪ್ರಚಾರದ ಸಭೆ ನಡೆಯಿತು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಆಮ್ ಅದ್ಮಿ ಪಕ್ಷದ ಅಭ್ಯರ್ಥಿ ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಒಬ್ಬ ವಿದ್ಯಾವಂತ ಅಭ್ಯರ್ಥಿ ಕೃಷಿ ವಿಜ್ಞಾನಿಯೂ ಆಗಿರುವ ಡಾ.ಬಿ.ಕೆ. ವಿಶುಕುಮಾರ್ ಗೌಡರನ್ನು ಆಯ್ಕೆ ವಿಧಾನ ಸಭೆಗೆ ಕಳುಹಿಸಿ ಎಂದು ಹೇಳಿದರು.

ಡಾ.ಬಿ.ಕೆ.ವಿಶುಕುಮಾರ್ ಗೌಡ ಮಾತನಾಡಿ ಪೆರ್ಲಂಪಾಡಿಯಲ್ಲಿ ಅಡಿಕೆ ಕೃಷಿ ಬೆಳೆಗಾರರೇ ಹೆಚ್ಚು ಇರುವ ಕಾರಣ ನೀವು ಈ ಬಾರಿ ನಿಮ್ಮ ಒಂದು ಮತ ನನಗೆ ನೀಡಿ, ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಪಕ್ಷದ ನಾಯಕರು, ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here