ರಾಜ್ಯದಲ್ಲಿ ಬಿಜೆಪಿ ಸರಕಾರ ಅನಿವಾರ್ಯ-ನೂರಕ್ಕೆ ನೂರು ಸ್ಥಾನ ಗೆಲುವು ಖಚಿತ-ರಘುಪತಿ ಭಟ್

0

ಪುತ್ತೂರು: ವ್ಯಕ್ತಿಗಿಂತ ಪಕ್ಷ ಮೊದಲು, ಪಕ್ಷಕ್ಕಿಂತ ದೇಶ ಮೊದಲು ಎಂದ ತತ್ವ ಸಿದ್ದಾಂತದೊಂದಿಗೆ ಬಿಜೆಪಿ ವ್ಯಕ್ತಿ ಆಧಾರಿತವಲ್ಲ, ಪಕ್ಷ ಆಧಾರಿತವಾಗಿ ನೂರಕ್ಕೆ ನೂರು ಸ್ಥಾನ ಗೆಲುವು ಖಚಿತ. ರಾಜ್ಯದಲ್ಲಿ ಬಿಜೆಪಿ ಸರಕಾರ ಅನಿವಾರ್ಯ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ವಿಚಾರಕ್ಕೆ ಒತ್ತು ಕೊಡುವುದು ಬಿಜೆಪಿ ಮಾತ್ರ, ಹಿಂದುತ್ವ ಉಳಿಸುವ ಪಕ್ಷ ಬಿಜೆಪಿಯನ್ನೇ ಗೆಲ್ಲಿಸಬೇಕಾಗಿದೆ. ಚುನಾವಣೆ ಬಂದಾಗ ಅಸಮಾಧಾನ ಇರುತ್ತದೆ. ಅದರೆ ಚುನಾವಣೆ ಬಂದಾಗ ಕಮಲದ ಚಿಹ್ನೆಗೆ ಮತ ನೀಡಿ ರಾಷ್ಟ್ರೀಯ ಚಿಂತನೆಗೆ ಆದ್ಯತೆ ನೀಡಬೇಕು ಎಂದು.
ಕಾಂಗ್ರೆಸ್ ಗ್ಯಾರೆಂಟಿ ಶುದ್ದ ಸುಳ್ಳು:
ಬಜೆಟ್ ಕ್ಯಾಲ್ಯುಕುಶನ್ ಇಲ್ಲದೆ ಗ್ಯಾರೆಂಟಿ ಕಾರ್ಡ್ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಗ್ಯಾರೆಂಟಿ ಶುದ್ದ ಸುಳ್ಳು ಎಂದು ರಘುಪತಿ ಭಟ್ ಹೇಳಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸುರೇಶ್ ಕಣ್ಣಾರಾಯ, ಕೇರಳ ಬಿಜೆಪಿ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್, ಮಹಿಳಾ ಮೋರ್ಚಾದ ಜಿಲ್ಲಾ ಕೋಶಾಧಿಕಾರಿ ಪ್ರೇಮಲತಾ ರಾವ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಮಾದ್ಯಮ ಪ್ರಮುಖ್ ಚಂದ್ರಶೇಖರ್ ರಾವ್ ಬಪ್ಪಳಿಗೆ ಪತ್ರಿಕಾಗೋಷ್ಢಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here