ವಿವೇಕಾನಂದ ಕ. ಮಾಧ್ಯಮ ಶಾಲೆಯ ʼಅನ್ನಪೂರ್ಣʼ ಪಾಕ ಶಾಲೆಯ ಭೂಮಿ ಪೂಜೆ

0

ಪುತ್ತೂರು : 2023-24 ರ ಶೈಕ್ಷಣಿಕ ವರ್ಷದಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆರಂಭಗೊಳ್ಳಲಿರುವ ಅನ್ನಪೂರ್ಣ ಯೋಜನೆಯ ಪಾಕ ಶಾಲೆ ನಿರ್ಮಾಣ ಕಾರ್ಯಕ್ಕೆ ದ್ವಾರಕಾ ಕನ್ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅನ್ನಪೂರ್ಣ ಯೋಜನೆಯು ಪುಣ್ಯಕಾರ್ಯ ಎಂದರು. ಯೋಜನೆಯಲ್ಲಿ ಜೋಡಿಕೊಂಡಿರುವ ಸಹೃದಯ ಶಿಕ್ಷಣಾಸಕ್ತ ಬಂಧುಗಳ ಸಹಯೋಗವನ್ನು ಸ್ಮರಿಸಿ ಶುಭ ಹಾರೈಸಿದರು.

ಪೂಜನ ಕಾರ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಶಾಲಾ ಆಡಳಿತ ಮಂಡಳಿ, ಅನ್ನಪೂರ್ಣ ಯೋಜನಾ ಸಮಿತಿ ಪದಾಧಿಕಾರಿಗಳು ,ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ಬಾಂಧದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಜನೆಯ ಸಹಕಾರಕ್ಕೆ ದೇಣಿಗೆ ನೀಡಿ ಸಹಕಾರ ನೀಡಿದವರಿಗೆ ಕೃತಜ್ಞತಾ ನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here