ಬಪ್ಪಳಿಗೆ ರಾಗಿಕುಮೇರಿ ಮಾರಿಯಮ್ಮ ದೇವಾಲಯದಲ್ಲಿ ಸಂಭ್ರಮ…ಗಣಪತಿ ಹೋಮ , ಪ್ರತಿಷ್ಠಾ ವರ್ಧಂತಿ ,ಮಾರಿಪೂಜೆ

0

ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ಮಾರಿಯಮ್ಮ ದೇವಾಲಯದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಮೇ.1 ರಿಂದ ಆರಂಭಗೊಂಡಿದ್ದು , ಮೇ. 7 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಮೇ.6ರಂದು ಬೆಳಿಗ್ಗೆ ಬ್ರಹ್ಮಶ್ರೀ ವೇ.ಮೂ.ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ದೇವಾಲಯದಲ್ಲಿ ಗಣಪತಿ ಹೋಮ, ಪ್ರತಿಷ್ಠಾ ವರ್ಧಂತಿ ಕಾರ್ಯವನ್ನು ನೆರವೇರಿಸಿ ಕೊಟ್ಟರು.

ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ,ಅಧ್ಯಕ್ಷ ಬೊಮ್ಮಣ್ಣ ನೆಲ್ಲಿಗುಂಡಿ , ಪ್ರ.ಕಾ.ಮೋಹನ್ ನೆಲ್ಲಿಗುಂಡಿ , ಉಪಾಧ್ಯಕ್ಷ ಸಂಜೀವ ಮೇಸ್ತ್ರಿ ಬಪ್ಪಳಿಗೆ , ಜತೆ ಕಾರ್ಯದರ್ಶಿ ಭಾಸ್ಕರ ನೆಲ್ಲಿಗುಂಡಿ ,ಜತೆ ಕೋಶಾಧಿಕಾರಿ ಲೋಲಾಕ್ಷ ಬಪ್ಪಳಿಗೆ , ಸಂಚಾಲಕ ಲೋಕೇಶ್ ದರ್ಖಾಸು , ಗಣೇಶ್ ಮತ್ತು ಸತೀಶ್ ಬಪ್ಪಳಿಗೆ ,ಸಂಜೀವ ನೆಲ್ಲಿಗುಂಡಿ ,ವಿಕ್ರಮ್ ನೆಲ್ಲಿಗುಂಡಿ , ಸುರೇಶ್ ಮೆಲ್ಕಾರ್ ,ಜಗದೀಶ್ ದರ್ಖಾಸು ಮತ್ತು ವಿನೀತ್ ನೆಲ್ಲಿಗುಂಡಿ ಹಾಗೂ ಭಕ್ತರು ಹಾಜರಿದ್ದು , ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಸಹಕಾರ ನೀಡಿದರು.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಅಮ್ಮನ ಮಹಾಪೂಜೆ ಬಳಿಕ , ದೈವಗಳ ಗಡುಸವಾರಿ, ಕಾಲೋನಿ ಸಂಚಾರ, ರಾತ್ರಿ ಅಗ್ನಿಸೇವೆ ನಂತರ ಭಂಡಾರ ತೆಗೆದು ಬಯಲು ಮಂಟಪಕ್ಕೆ ತೆರಳಿ ಪ್ರತಿಷ್ಠಾಪನೆ ಮತ್ತು ಮಹಾಪೂಜೆ ನಡೆಯಲಿದೆ.


ಮೇ. 7ರಂದು ಮಧ್ಯಾಹ್ನ ಮಹಾಪೂಜೆ ಪ್ರಾರಂಭ, ಅಮ್ಮನವರ ದರ್ಶನ, ಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಸತ್ಯಸಾರಮಣಿ, ದುರ್ಗೆ ಎಲ್ಲಮ್ಮ ದೈವಗಳ ದರ್ಶನ, ಹರಕೆ ಸ್ವೀಕಾರ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಅಮ್ಮನವರ ಉತ್ಸವ ಮೂರ್ತಿ ಮರಳಿ ದೇವಸ್ಥಾನಕ್ಕೆ ತೆರಳಿ ಮಹಾಪೂಜೆ ನಡೆಯಲಿದೆಯೆಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಅರುಣ್ ಕುಮಾರ್ ಪುತ್ತಿಲ ಭೇಟಿ….
ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ದೇವಾಲಯ ಕ್ಕೆ ಭೇಟಿ ನೀಡಿ , ದೇವರ ಆಶೀರ್ವಾದ ಪಡೆದುಕೊಂಡರು. ದೇವಾಲಯದ ಎಲ್ಲಾ ಪದಾಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here