ಕಾಂಗ್ರೆಸ್ ಪಕ್ಷ ಯುವಕರಿಗೆ ಪಾಕೆಟ್ ಮನಿ ಕೊಡುವ ಬದಲು ಉದ್ಯೋಗದ ಭರವಸೆ ಕೊಡಿ

0

ಬುದ್ದಿ ಕಲಿಸುತ್ತೇನೆ ಎಂದು ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಅಭಿವೃದ್ದಿಯನ್ನು ಹೇಗೆ ಬಯಸುತ್ತೀರಾ: ದಿವ್ಯ ಪ್ರಭಾ ಗೌಡ

ಪುತ್ತೂರು: ಇಂದು ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ರವರು ಇಂದು ಪುತ್ತೂರು ನಗರದ ದರ್ಬೆ ವೃತ್ತ, ಬಸ್ಸು ನಿಲ್ದಾಣ ಬಳಿ ಹಾಗೂ ಹಲವೆಡೆ ಸಾರ್ವಜನಿಕ ಭಾಷಣಗಳನ್ನು ಮಾಡಿ ಭರ್ಜರಿ ಪ್ರಚಾರ ನಡೆಸಿದರು.ಕಾಂಗ್ರೆಸ್ ಪಕ್ಷವು ಗ್ಯಾರಂಟಿ, ಭರವಸೆಗಳು ಪೊಳ್ಳು ಭರವಸೆಗಳು. ಪದವೀಧರ ವಿಧ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ನೀಡದೆ ಪಾಕೆಟ್ ಮನಿ ನೀಡಿ ಸೋಮರಿಗಳನ್ನಾಗಿ ಮಾಡಲು ಹೊರಟಿದೆ. ಬುದ್ದಿ ಕಲಿಸುತ್ತೇನೆ ಎಂದು ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಯಾವ ಅಭಿವೃದ್ದಿಯನ್ನು ಪುತ್ತೂರಿನ ಜನತೆ ಬಯಸಬಹುದು. ಈ ಬಾರಿ ಪುತ್ತೂರಿನ ಜನತೆ ಬದಲಾವಣೆಯನ್ನು ಬಯಸುತ್ತಿದೆ ಕಾಂಗ್ರೆಸ್ಸ್ ಹಾಗೂ ಬಿಜೆಪಿಯ ಆಡಳಿತ ನೋಡಿ ಜನರು ಬೇಸತ್ತಿದ್ದಾರೆ.

ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿದೆ ಈ ಬಾರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವುದು ಪಕ್ಕ. ಕುಮಾರಸ್ವಾಮಿಯವರು ನೀಡಿರುವ ಪಂಚರತ್ನ ಯೋಜನೆಯು ಯಾವುದೇ ಧರ್ಮಕ್ಕೆ,ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ ಎಲ್ಲಾ ವರ್ಗದ ಜನರಿಗೆ ಬೇಕಾಗಿರುವ ಯೋಜನೆಗಳು ಈ ಪಂಚರತ್ನ ಯೋಜನೆಯಲ್ಲಿ ಒಳಗೊಂಡಿದೆ. ಹಾಗಾಗಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬಂದಿರುವ ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿಕೊಟ್ಟಲ್ಲಿ ಪುತ್ತೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರು ಜಾ ಕೆ ಮಾಧವ ಗೌಡ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಬ್ರಾಹಿಂ ಗೊಳಿಕಟ್ಟೆ, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರು ಅಶ್ರಫ್ ಕಲ್ಲೇಗ, ಐ ಸಿ ಕೈಲಾಶ್ ಗೌಡ, ರಾಜ್ಯ ಜೆಡಿಎಸ್ ವಕ್ತಾರೆ ಶ್ರೀಮತಿ ಜೋಹರ ನಿಸಾರ್ ಅಹ್ಮದ್, ದ.ಕ ಮಹಿಳಾ ಜೆಡಿಎಸ್ ಕಾರ್ಯದರ್ಶಿ ಪ್ರಿಯ ಸಾಲಿಯಾನ್ , ಹಮೀದ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here